ಟೀಮ್ ಇಂಡಿಯಾದ ಮಾಜಿ ನಾಯಕ, ಭಾರತಕ್ಕೆ ಎರಡೆರಡು ವರ್ಲ್ಡ್ಕಪ್ ಅನ್ನು ಭಾರತಕ್ಕೆ ತಂದು ಕೊಟ್ಟ ಜಗಮೆಚ್ಚಿದ ಕ್ರಿಕೆಟಿಗ. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ 3 ಭಾರಿ ಆ ತಂಡವನ್ನು ಚಾಂಪಿಯನ್ ಪಟ್ಟದಲ್ಲಿ ಕೂರಿಸಿದ ಚಾಂಪಿಯನ್ ಆಟಗಾರ.
ನಿನ್ನೆಯಷ್ಟೇ ಮುಕ್ತಾಯವಾದ 12ನೇ ಆವೃತ್ತಿಯ ಐಪಿಎಲ್ನಲ್ಲಿ ಕೇವಲ ಒಂದೇ ಒಂದು ರನ್ಗಳಿಂದ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ಗೆ ಶರಣಾಯಿತು. ಮುಂಬೈ ಈ ಮೂಲಕ 4ನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸ್ವಲ್ಪದರಲ್ಲೇ 4ನೇ ಬಾರಿ ಚಾಂಪಿಯನ್ ಆಗುವ ಅವಕಾಶವನ್ನು ಧೋನಿ ಪಡೆ ಮಿಸ್ ಮಾಡಿಕೊಂಡಿತು.
ಅದೇನೇ ಇದ್ದರು ಧೋನಿ ಮಾತ್ರ ವಿಶ್ವದ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ನಿಂತಾಗಿದೆ. ಕೆಲವು ಸರಣಿ, ಪಂದ್ಯಗಳನ್ನು ಸೋತ ಮಟ್ಟಿಗೆ ಧೋನಿಯ ತಾಕತ್ತನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಎಲ್ಲಾ ಮ್ಯಾಚ್ಗಳಲ್ಲೂ ಯಶಸ್ಸು ಕಾಣುವುದು ಅಸಾಧ್ಯ. ಧೋನಿ ಇಡೀ ವಿಶ್ವಕ್ರಿಕೆಟೇ ಮೆಚ್ಚು ಮಹಾನ್ ಆಟಗಾರ ಅನ್ನುವುದರಲ್ಲಿ ನೋ ಡೌಟ್.
ಧೋನಿಯ ಗುಣಗಾನ ಮಾಡದೇ ಇರೋರು ತುಂಬಾ ಕಮ್ಮಿ. ಇಷ್ಟೆಲ್ಲಾ ಹೇಳೋಕೆ ಕಾರಣ ಆಸ್ಟ್ರೇಲಿಯಾದ ಮಾಜಿ ಓಪನರ್ ಮ್ಯಾಥ್ಯು ಹೇಡನ್. ಆಸೀಸ್ ಕ್ರಿಕೆಟ್ ನ ಲೆಜೆಂಡ್ ಗಳಲ್ಲಿ ಮ್ಯಾಥ್ಯು ಹೇಡನ್ ಕೂಡ ಒಬ್ರು. ಮ್ಯಾಥ್ಯು ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಗುಣಗಾನ ಮಾಡಿದ್ದಾರೆ.
ಹಿಂದೆ ಧೋನಿ ನಾಯಕತ್ವದ ಚೆನ್ನೈ ಪರ ಆಡಿದ್ದ ಮ್ಯಾಥ್ಯು ಹೇಡನ್ ‘ಸಿಎಸ್ಕೆ -ದಿ ಸೂಪರ್ ಕಿಂಗ್ಸ್’ ಅನ್ನೋ ಕಾರ್ಯಕ್ರಮವೊಂದರಲ್ಲಿ ಧೋನಿ ಬಗ್ಗೆ ಮಾತಾಡಿದ್ದಾರೆ. ”ಧೋನಿ ಆಟಗಾರನಷ್ಟೇ ಅಲ್ಲ. ಅವರು ಕ್ರಿಕೆಟಿನ ಒಂದು ಯುಗ. ಆತ ಕ್ರಿಕೆಟಿಗನಾಗಿದ್ದರೂ ಹೆಚ್ಚುಕಡಿಮೆ ಅವರೊಬ್ಬ ರಾಷ್ಟ್ರನಾಯಕನಂತೆ” ಅಂತ ಹೇಡನ್ ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ ಧೋನಿ ನಮ್ಮಳೊಗೊಬ್ಬ.. ಅವರು ಏನನ್ನೂ ಮಾಡಬಲ್ಲರು, ಎಲ್ಲೂ ಆಡಬಲ್ಲರು ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
‘ಧೋನಿ ಆಟಗಾರ ಮಾತ್ರವಲ್ಲ ಅವರೇ ಕ್ರಿಕೆಟ್ ಯುಗ’..!
RELATED ARTICLES
Recent Comments
on ಕ್ಷಮಿಸಿ ಪಾಕ್ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ಆಗಲ್ಲ: ಪಾಕ್ನ ಟ್ರೋಲ್ ಮಾಡಿದ ಬ್ಲಿಂಕ್ಇಟ್
on ಗ್ರಾಮಿಣ ಬಾಗದ ಕಾಲೇಜನ್ನು ಬೆಳಗಾವಿಗೆ ಸ್ಥಳಾಂತರ ವಿರುದ್ದ ಸತ್ಯಾಗ್ರಹ ಮಾಡುತ್ತೆನೆ ಅದಕ್ಕಾಗಿ ಜೈಲಿಗೆ ಹೋಗಲು ಸಿದ್ದ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


