ಕುವೈತ್: ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಉಗ್ರ ದಾಳಿ ಮತ್ತು ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಜಾಗತಿಕ ಸಮುದಾಯಕ್ಕೆ ಮಾಹಿತಿ ನೀಡುವ ನಿಟ್ಟಿನಲ್ಲಿ ಭಾರತದ ನಿಯೋಗ ಕುವೈತ್ಗೆ ತೆರಳಿದ್ದು. ಇಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ ಪಾಕಿಸ್ತಾನದ ಸೇನೆ ಮತ್ತು ಸರ್ಕಾರವನ್ನು ನಾಲಾಯಕ್ ಜೋಕರ್ಗಳು ಎಂದು ಕರೆದಿದ್ದಾರೆ.
ಇದನ್ನೂ ಓದಿ :ಬುರ್ಕಾದಾರಿ ಮಹಿಳೆಗೆ ಮುತ್ತಿಟ್ಟು ಪರಾರಿ; ಯುಪಿ ಪೊಲೀಸರಿಂದ ಆರೋಪಿಗೆ ಲಾಠಿ ರುಚಿ
2019ರಲ್ಲಿ ಚೀನಾ ನಡೆಸಿದ್ದ ಮಿಲಿಟರಿ ತರಬೇತಿ ಚಿತ್ರವನ್ನು ತೋರಿಸಿ, ಭಾರತದ ವಿರುದ್ದ ನಡೆಸಿದ ಕಾರ್ಯಚರಣೆ ಎಂದು ಬಿಂಬಿಸಿ ಪಾಕ್ ಪ್ರಧಾನಿಗೆ, ಫೈಲ್ಡ್ ಮಾರ್ಷಲ್ ಅಸೀಮ್ ಮುನಿರ್ ಪೋಟೊವೊಂದನ್ನು ಗಿಫ್ಟ್ ನೀಡಿದ್ದು. ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರು ಉಂಟು ಮಾಡಿತ್ತು. ಇದನ್ನ ಉಲ್ಲೇಖಿಸಿ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಕಿಸ್ತಾನವನ್ನ ಪುಲ್ ರೋಸ್ಟ್ ಮಾಡಿದ್ದು, ‘ಇಂತಹ ಬೇವಕೂಫ್ ಜೋಕರ್ ಗಳು ಭಾರತದೊಂದಿಗೆ ಯುದ್ಧ ಮಾಡ್ತಾರಂತೆ.. ಹೇಗಿದೆ ನೋಡಿ’? ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಫಿ ಮಾಡಲು, ಬುದ್ದಿ ಇಲ್ಲದ ಮೂರ್ಖರು..!</st
ಓವೈಸಿ??? pic.twitter.com/Ol1S8JK7Xc
— Prathap Simha (@mepratap) May 27, 2025
rong>
ಮುಂದುವರಿದು ಮಾತನಾಡಿದ ಓವೈಸಿ ‘ಶಾಲೆಯಲ್ಲಿ ಚೆನ್ನಾಗಿ ಓದುವ ಮಕ್ಕಳ ಜೊತೆ ದಡ್ಡ ವಿದ್ಯಾರ್ಥಿಗಳು ಕಾಫಿ ಮಾಡಲು ನೋಡುತ್ತಿರುತ್ತಾರೆ. ಆದರೆ ಪಾಕಿಸ್ತಾನಕ್ಕೆ ಕಾಫಿ ಮಾಡುವಷ್ಟು ಬುದ್ದಿವಂತಿಕೆ ಇಲ್ಲ. ಇಂತಹ ಜೋಕರ್ ದೇಶ ಏನು ಮಾಡುತ್ತದೆಯೋ ಅದನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸಬೇಡಿ ಎಂದು ಓವೈಸಿ ಹೇಳಿದರು. ಇದನ್ನೂ ಓದಿ :ಸರ್ಧಾರ ಪಟೇಲರ ಸಲಹೆ ಸ್ವೀಕರಿಸಿದ್ದರೆ, ಕಾಶ್ಮೀರದಲ್ಲಿ ಉಗ್ರ ದಾಳಿಗಳು ನಡೆಯುತ್ತಿರಲಿಲ್ಲ : ಮೋದಿ