Saturday, August 23, 2025
Google search engine
HomeUncategorizedಭೂಮಿ ನಡುಗಿತು, ಮಳೆ ಬೆಳೆ ತಲ್ಲಣಗೊಂಡಿತು, ಜನರು ಆಪತ್ತುಗೊಂಡಾರು : ಕೋಡಿ ಶ್ರೀ ಸ್ಫೋಟಕ ಭವಿಷ್ಯ

ಭೂಮಿ ನಡುಗಿತು, ಮಳೆ ಬೆಳೆ ತಲ್ಲಣಗೊಂಡಿತು, ಜನರು ಆಪತ್ತುಗೊಂಡಾರು : ಕೋಡಿ ಶ್ರೀ ಸ್ಫೋಟಕ ಭವಿಷ್ಯ

ಹುಬ್ಬಳ್ಳಿ : ಭೂಮಿ ನಡುಗಿತು, ಮಳೆ ಬೆಳೆ ತಲ್ಲಣಗೊಂಡಿತು. ಜನರು ಆಪತ್ತುಗೊಂಡಾರು ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪರೀತವಾದ ಜಲಪ್ರಳಯದಿಂದ ಜಾಗತಿಕ ಮಟ್ಟದ ಒಂದೆರಡು ರಾಷ್ಟ್ರಗಳು ಮುಚ್ಚುತ್ತವೆ ಎಂದು ಹೇಳಿದರು.

ರಾಜ್ಯದಲ್ಲಿ ಮಳೆ ಸಾಕಷ್ಟು ಬರುತ್ತದೆ. ಜಲ ಪ್ರಳಯವಾಗುತ್ತದೆ. ಪ್ರಕೃತಿ ಮುನಿದು ಸರಿಯಾಗುತ್ತದೆ ಎಂದು ಮುಂದಿನ ಮೂರು ಭವಿಷ್ಯ ನುಡಿದರು. ಎಲ್ಲಿಯೋ ಆದ ಘಟನೆ ವಾಯುವ್ಯ ಮಾಲಿನ್ಯವಾಗಿ ಜನರು ಅಕಾಲಿಕ ಮರಣ ಹೊಂದುತ್ತಾರೆ. ಎಲ್ಲೋ ಹಾಕಿದ ಬಾಂಬ್ ನಮ್ಮ ರಾಷ್ಟ್ರದ ಜನರ ಮೇಲೆ ಪರಿಣಾಮ ಬಿರುತ್ತದೆ. ವಿಜಯ ದಶಮಿಯಿಂದ ಸಂಕ್ರಾಂತಿ ವರಿಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳತ್ತಾರೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

ಇದನ್ನೂ ಓದಿ : ‘ಪಂಚೆ ಪಡೆ’ ಗೆಲ್ಲುವುದೋ, BSY ಬ್ರಿಗೇಡ್ ಗೆಲ್ಲುವುದೋ? : ಕಾಂಗ್ರೆಸ್ ವ್ಯಂಗ್ಯ

ಕರ್ನಾಟಕಕ್ಕೆ ಕೆಲವೊಂದು ಆಪತ್ತು

ಆಳುವವರು ಅರಿತುಕೊಳ್ಳಬೇಕು, ಇಲ್ಲದಿದ್ದರೆ ಅಪಾಯ ಕಟ್ಟಿದ ಬುತ್ತಿ. ಇದು ಬಹು ದೊಡ್ಡ ದುರ್ಘಟನೆ. ಕರ್ನಾಟಕಕ್ಕೆ ಕೆಲವೊಂದು ಆಪತ್ತು ಇದೆ. ಕೆಲವು ಸಾವು ನೋವು ಸಂಭವಿಸುತ್ತವೆ. ಗೌರಿ ಶಂಕರ ಶಿವ ಶಿವ ಎಂದಿತು. ಭೂಮಿ ನಡುಗಿತು, ಮಳೆ ಬೆಳೆ ತಲ್ಲಣಗೊಂಡಿತು. ಜನರು ಆಪತ್ತುಗೊಂಡಾರು. ನಾನು ಹೇಳಿದಾಗ ಒಂದು ಘಟನೆ ಹಾಗೇ ಆಗುತ್ತದೆ. ಅದನ್ನು ತಪ್ಪಿಸಿಕೊಳ್ಳುವುದು ಆಳುವವರ ಕೈಯಲ್ಲಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments