Thursday, September 18, 2025
HomeUncategorizedಸ್ನೇಹಿತರಂತೆ ಕಾಣ್ತಾರೆ, ಗೊತ್ತಿಲ್ಲದಂತೆ ಬೆನ್ನಿಗೆ ಚೂರಿ ಹಾಕ್ತಾರೆ : ಸುದೀಪ್ ಸ್ಫೋಟಕ ಹೇಳಿಕೆ..!

ಸ್ನೇಹಿತರಂತೆ ಕಾಣ್ತಾರೆ, ಗೊತ್ತಿಲ್ಲದಂತೆ ಬೆನ್ನಿಗೆ ಚೂರಿ ಹಾಕ್ತಾರೆ : ಸುದೀಪ್ ಸ್ಫೋಟಕ ಹೇಳಿಕೆ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚಿತ್ರರಂಗದಲ್ಲಿ ಗೊತ್ತಿಲ್ಲದಂತೆ ಬೆನ್ನಿಗೆ ಚೂರಿ ಹಾಕಿ ಬಿಡ್ತಾರೆ ಅಂತ ಸುದೀಪ್ ಹೇಳಿದ್ದು, ಇದೀಗ ಅದೊಂದು ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
ಪೈಲ್ವಾನ್​ ಯಶಸ್ವಿ ಓಟದ ಖುಷಿಯಲ್ಲಿರೋ ಬಾದ್​ ಷಾ ಕಿಚ್ಚ ಸುದೀಪ್, ಬಾಲಿವುಡ್​​ನ ಪಿಂಕ್​​ವಿಲ್ಲಾ ಅನ್ನೋ ಯೂಟ್ಯೂಬ್​ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ಚಿತ್ರರಂಗದಲ್ಲಿ ರಾಜಕೀಯ ಇದೆ. ಇಲ್ಲಿ ಗೊತ್ತಿಲ್ಲದೆ ಬೆನ್ನಿಗೆ ಚುಚ್ಚುತ್ತಾರೆ ಅಂದಿದ್ದಾರೆ.
ಇಂಟರ್​​ವ್ಯೂನಲ್ಲಿ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ದೀರಾ…ಆ ಸಿನಿಮಾದಲ್ಲಿ ಚಿರಂಜೀವಿ ಅವ್ರ ಜೊತೆ ನಟಿಸಿದ್ದೀರಿ. ಚಿರಂಜೀವಿ ಅವ್ರಿಂದ ಕಲಿತ ದೊಡ್ಡ ಪಾಠವೇನು ಅಂತ ಆ್ಯಂಕರ್ ಪ್ರಶ್ನೆ ಮಾಡಿದ್ರು. ಆ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ ಸುದೀಪ್, ಯಾವತ್ತೂ ಕೂಡ ರಾಜಕೀಯ ಕ್ಷೇತ್ರ ಪ್ರವೇಶ ಬಾರ್ದು ಅನ್ನೋದನ್ನು ಕಲಿತೆ ಅಂದರು.
ಆಮೇಲೆ ಆ್ಯಂಕರ್, ನಿಮ್ಗೆ ರಾಜಕೀಯ ಪಕ್ಷ ಸೇರಲು ಆಹ್ವಾನ ಬಂದಿತ್ತಾ ಅಂತ ಕೇಳಿದ್ದಕ್ಕೆ ಸುದೀಪ್, ಹೌದು, ರಾಜಕೀಯ ಪಕ್ಷ ಸೇರಲು ಆಹ್ವಾನ ಬಂದಿತ್ತು. ಅವೆಲ್ಲಾ ಹಾಗಿರಲಿ, ನಾವು ಇರೋ ಕ್ಷೇತ್ರದಲ್ಲೇ ನಡೆಯುವ ದೊಡ್ಡ ರಾಜಕೀಯ ಬೇರೆ ಕ್ಷೇತ್ರದಲ್ಲಿ ನಡೆಯಲ್ಲ. ರಾಜಕೀಯ ಕ್ಷೇತ್ರದಲ್ಲಾದ್ರೆ ಬಿಜೆಪಿಯವ್ರು, ಕಾಂಗ್ರೆಸ್​ನವ್ರು ಆ ಪಕ್ಷ, ಈ ಪಕ್ಷ ಅಂತ ಗುರುತಿಸ್ಬಹುದು. ಆದ್ರೆ ಸಿನಿಮಾದಲ್ಲಿ ಯಾರು ಯಾವ ಪಕ್ಷದವ್ರು ಅಂತ ಹೇಳೋಕಾಗಲ್ಲ. ಎಲ್ರೂ ಕೂಡ ಸ್ನೇಹಿತರಂತೆ ಇರ್ತಾರೆ. ಇದ್ದಕ್ಕಿದ್ದಂತೆ ನಿಮ್ಮ ಬೆನ್ನಲ್ಲಿ ನೋವು ಕಾಣಿಸಿಕೊಳ್ಳುತ್ತೆ..! ಏನು ಅಂತ ಹಿಂತಿರುಗಿ ನೋಡಿದ್ರೆ ಚುಚ್ಚಿ ಹೋಗಿರ್ತಾರೆ. ಯಾರು ಯಾವಾಗ ಚುಚ್ಚಿದ್ರು ಅನ್ನೋದೇ ಗೊತ್ತಾಗಲ್ಲ ಅಂತ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments