Monday, August 25, 2025
Google search engine
HomeUncategorized'ರಾಜ್ಯದಲ್ಲಿ ಕಮಲ' ಅರಳಿಸಲು ಕೇಸರಿ ಕಲಿಗಳ ರಣತಂತ್ರ

‘ರಾಜ್ಯದಲ್ಲಿ ಕಮಲ’ ಅರಳಿಸಲು ಕೇಸರಿ ಕಲಿಗಳ ರಣತಂತ್ರ

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಕೌಂಟ್​ಡೌನ್ ಶುರುವಾಗಿದೆ. ನಾಳೆ ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.

ರಾಷ್ಟ್ರೀಯ ಹಾಗೂ ರಾಜ್ಯ ಸುದ್ದಿ ವಾಹಿನಿಗಳ ಬಹುತೇಕ ಸರ್ವೆಗಳಲ್ಲಿ ಅತಂತ್ರ ಸರ್ಕಾರ ರಚನೆಯಾಗುವ ಸೂಚನೆ ಸಿಕ್ಕಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ರಹಸ್ಯ ಸಭೆಯನ್ನು ನಡೆಸಿವೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರು ರಹಸ್ಯ ಮಾತುಕತೆ ನಡೆಸಿದ್ದು ತಂತ್ರಗಾರಿಕೆ ಹೆಣೆದಿದ್ದಾರೆ. ಈ ಬಾರಿ ರಾಜ್ಯದಲ್ಲಿ 100ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಕ್ಷೇತ್ರದ ಬಗ್ಗೆ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಸಮಾಲೋಚನೆ ಮಾಡಿದ್ದಾರೆ.

ಇದನ್ನೂ ಓದಿ : ‘ಹಳೇ ಮೈಸೂರು ಕಬ್ಜ’ ಮಾಡೋದು ಯಾರು? : ಹೀಗಿದೆ ಸ್ಟಾರ್ ವಾರ್ ಕಿಕ್

ಯಡಿಯೂರಪ್ಪ ಒಬ್ಬೊಬ್ಬರಿಗೂ ಒಂದೊಂದು ಟಾಸ್ಕ್​ ನೀಡಿದ್ದಾರೆ. ಇದಲ್ಲದೆ ಒಂದು ವೇಳೆ ಅತಂತ್ರ ಸರ್ಕಾರ ರಚನೆಯಾದರೆ ಆಪರೇಷನ್​ ಕಮಲಕ್ಕೆ ಸ್ಕೆಚ್​ ಹಾಕಲಾಗಿದೆ. ಇನ್ನೂ, ರೆಸಾರ್ಟ್ ರಾಜಕೀಯ ಅನಿವಾರ್ಯ ಆದ್ರೆ ರೆಸಾರ್ಟ್ ಕೂಡ ಸೂಚನೆ ನೀಡಲಾಗಿದೆ. ರೆಸಾರ್ಟ್ ಬುಕ್ ಮಾಡಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಪಕ್ಷೇತರರಿಗೆ ಗಾಳ ಹಾಕಲು ಸ್ಕೆಚ್

ಇನ್ನೂ ಪಕ್ಷೇತರವಾಗಿ ಗೆಲ್ಲುವ ಸಾಧ್ಯತೆ ಇದ್ದವರಿಗೆ ಗಾಳ ಹಾಕಲು ಸ್ಕೆಚ್​ ಹಾಕಿದ್ದಾರೆ. ಬಿಜೆಪಿ ಗೆಲ್ಲಬಹುದಾ ಸಂಭಾವ್ಯ ಪಕ್ಷೇತರ ಶಾಸಕರ ಪಟ್ಟಿ ಸಿದ್ದಪಡಿಸಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರೇ ಕೆಲವರ ಜೊತೆ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಸ್ಥಳಿಯ ನಾಯಕರಿಗೂ ಪಕ್ಷೇತರರ ಜೊತೆ ಸಂಪರ್ಕದಲ್ಲಿರಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments