ಬೆಂಗಳೂರು : 9 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ಗೆ ತಲುಪಿದ್ದು. ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಕಪ್ ಎತ್ತಿ ಹಿಡಿಯುವ ಉತ್ಸಾದಲ್ಲಿದೆ. ಆರ್ಸಿಬಿ ತಂಡಕ್ಕೆ ಎಲ್ಲಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದ್ದು. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಆರ್ಸಿಬಿ ತಂಡದ ಜರ್ಸಿ ಧರಿಸಿ ಕರ್ನಾಟಕ ಸರ್ಕಾರದಿಂದ ಶುಭಾಷಯ ಕೋರಿದ್ದಾರೆ.
ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ಡಿಕೆ ಶಿವಕುಮಾರ್ “ವಿಡಿಯೋದಲ್ಲಿ ಆರ್ಸಿಬಿ ಜರ್ಸಿ ತೊಟ್ಟು 18 ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇವೆ. ಲಕ್ಷಾಂತರ ಜನರು ಕನಸು ಕಾಣುತ್ತಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ. ಕರ್ನಾಟಕ ನಿಮ್ಮ ಜೊತೆ ಇದೆ. ಟ್ರೋಫಿಯನ್ನ ಗೆದ್ದು ತನ್ನಿ ಎಂದು ಡಿಕೆ ಶಿವಕುಮಾರ್ ಶುಭಾಷನ ಕೋರಿದ್ದಾರೆ. ಇದನ್ನೂ ಓದಿ :ನಿಶ್ಚಿತಾರ್ಥ ಮಾಡಿಕೊಳ್ಳಲು ಚಿನ್ನದ ಸರ ಕದ್ದ ಲಾಡ್ಜ್ ಮ್ಯಾನೇಜರ್ ಬರ್ಬರ ಕೊ*ಲೆ
Ee Sala Cup Namde! ♥️?
18 years of grit.
Every prayer, every cheer, every heartbreak – it all leads to today.
This is more than a match.
Our moment. Our Cup.
Wishing @RCBTweets the very best – Karnataka is with you!#PlayBold #ನಮ್ಮRCB #IPL2025 pic.twitter.com/cTmRhjgjts— DK Shivakumar (@DKShivakumar) June 3, 2025
ಅತಿರೇಕದ ಸಂಭ್ರಮಚರಣೆಗೆ ಬ್ರೇಕ್ ಹಾಕಲು ಪೊಲೀಸರು ಸಜ್ಜು..!
ಕನ್ನಡಿಗರ 18 ವರ್ಷಗಳ ತಪಸ್ಸಿನ ಫಲ ಸಿಗುವ ಕಾಲ ಸನಿಹವಾಗಿದ್ದು. ಆರ್ಸಿಬಿ ಅಭಿಮಾನಿಗಳು ಈಗಾಗಲೇ ಕಪ್ ಗೆದ್ದಿರುವ ಸಂಭ್ರಮದಲ್ಲಿದ್ದಾರೆ. ಪಂದ್ಯದ ವೇಳೆ ಹಾಗೂ ಆರ್ಸಿಬಿ ಗೆಲುವಿನ ಬಳಿಕ ಸಂಭ್ರಮಾಚರಣೆ ಹೆಚ್ಚಾಗುವ ಸಾಧ್ಯತೆ ಇದ್ದು. ಸೆಲಬ್ರೇಷನ್ ಹದ್ದು ಮೀರದಂತೆ ಪೊಲೀಸರು ಸೂಚನೆ ಹೊರಡಿಸಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಈ ಕುರಿತು ಸೂಚನೆ ಹೊರಡಿಸಿದ್ದು. ಸೆಲಬ್ರೆಷನ್ ವೇಳೆ ಅವಘಡ ಸಂಭವಿಸಿದಂತೆ ಎಲ್ಲಾ ಡಿಸಿಪಿ ಹಾಗೂ ಎಸಿಪಿ ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ :IPLನಿಂದ ರಾಷ್ಟ್ರೀಯತೆ ಬರಲ್ಲ; RCBಗೆ ಶುಭ ಕೋರಲು ಸಿ,ಟಿ ರವಿ ನಕಾರಾ
ಅಭಿಮಾನದ ಹೆಸರಲ್ಲಿ ರಸ್ತೆ ತಡೆಯುವುದು, ಟೈರ್ ಗೆ ಬೆಂಕಿ ಹಚ್ಚುವುದು, ವಾಹನಗಳು ತಡೆಯುವುದು, ಸಾರ್ವಜನಿಕರಿಗೆ ತೊಂದರೆ, ಶಾಂತಿಭಂಗ ಉಂಟು ಮಾಡುವಂತಿಲ್ಲ ಈ ಬಗ್ಗೆ ನಿಗಾ ವಹಿಸಲು ಡಿಸಿಪಿ ಹಾಗೂ ಎಸಿಪಿಗಳಿಗೆ ಕಮೀಷನರ್ ಸೂಚನೆ ನೀಡಿದ್ದಾರೆ. ಎಂ.ಜಿ ರಸ್ತೆ, ಕೋರಮಂಗಲ, ಇಂದಿರಾನಗರ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಹೆಚ್ಚಿನ ನಿಗಾ ವಹಿಸಿದ್ದು. ಅವಧಿ ಮೀರಿ ಪಬ್, ಕ್ಲಬ್, ರೆಸ್ಟೋರೆಂಟ್ಗಳನ್ನು ತೆರೆಯುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ.