Tuesday, September 9, 2025
HomeUncategorizedಸ್ನೇಹಿತನ ಕೊ*ಲೆ ಮಾಡಿ, ಶಿರಾಡಿಘಾಟ್​ ಪ್ರಪಾತಕ್ಕೆ ಎಸೆದ ಕೊ*ಲೆಗಡುಕರು !

ಸ್ನೇಹಿತನ ಕೊ*ಲೆ ಮಾಡಿ, ಶಿರಾಡಿಘಾಟ್​ ಪ್ರಪಾತಕ್ಕೆ ಎಸೆದ ಕೊ*ಲೆಗಡುಕರು !

ಹಾಸನ : ಸ್ನೇಹಿತನ ಕೊಲೆ ಮಾಡಿ, ಶವವನ್ನು ಶಿರಾಡಿಘಾಟ್​ನ ಪ್ರಪಾತಕ್ಕೆ ಎಸೆದಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು 34 ವರ್ಷದ ಶಿವಕುಮಾರ್​ ಎಂದು ಗುರುತಿಸಲಾಗಿದೆ.

ಹಾಸನ ತಾಲ್ಲೂಕಿನ, ಹರಳಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಇದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಎಂಬುವವರಿಂದ ಕೃತ್ಯ ನಡೆದಿದೆ. ಹರಳಹಳ್ಳಿ ಗ್ರಾಮದ ಶಿವಕುಮಾರ್​ ಹೈದರಾಬಾದ್​ನ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಆದರೆ ಕಳೆದ ನಾಲ್ಕು ದಿನದ ಹಿಂದೆ ಗ್ರಾಮದ ಶರತ್​ ಮತ್ತು ಪ್ರತಾಪ್​​ ಎಂಬುವವರು ಶಿವಕುಮಾರ್​ರನ್ನು ಹೈದರಾಬಾದ್​ನಿಂದ ಕರೆಸಿಕೊಂಡಿದ್ದರು.

ಇದನ್ನೂ ಓದಿ: ಪ್ರಚೋದನಕಾರಿ ಭಾಷಣ ಆರೋಪ : ಪ್ರಮೋದ್​ ಮುತಾಲಿಕ್​ ವಿರುದ್ದ ಪ್ರಕರಣ ದಾಖಲು !

ಶುಕ್ರವಾರ ಶಿವಕುಮಾರ್​ನನ್ನು ಮನೆಯಿಂದ ಕರೆದೊಯ್ದಿದ್ದ ದುಷ್ಕರ್ಮಿಗಳು. ನಂತರ ಶಿವಕುಮಾರ್​ಗೆ ಕಂಠಪೂರ್ತಿ ಕುಡಿಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಶವವನ್ನು ಶಿರಾಡಿಘಾಟ್​ನ ಗುಂಡ್ಯಾದ ಬಳಿಯಲ್ಲಿ ಶವವನ್ನು ಪ್ರಪಾತಕ್ಕೆ ಎಸೆದಿದ್ದರು. ಈ ವೇಳೆ ಕೊಲೆಗಡುಕರಿಂದ ತಪ್ಪಿಸಿಕೊಂಡಿದ್ದ ದೀಲಿಪ್​ ಎಂಬಾತ ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದನು .

ದೀಲಿಪ್​ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಶವವನ್ನು ಹುಡಿಕಿದ್ದಾರೆ. ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಶರತ್ ಹಾಗೂ ಪ್ರತಾಪ್ ಹುಡುಕಾಟವನ್ನು ಪೊಲೀಸರು ಆರಂಭಿಸಿದ್ದು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಗ್ರಾಮಾಂತರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments