Saturday, August 23, 2025
Google search engine
HomeUncategorizedಸ್ಟಾಲಿನ್ ಸಿಎಂ ಆಗಲಿ ಅಂತಾರೆ, ಕಾವೇರಿ ಬಗ್ಗೆ ಮಾತಾಡಲು ಆಗಲ್ವಾ? : ಯತ್ನಾಳ್

ಸ್ಟಾಲಿನ್ ಸಿಎಂ ಆಗಲಿ ಅಂತಾರೆ, ಕಾವೇರಿ ಬಗ್ಗೆ ಮಾತಾಡಲು ಆಗಲ್ವಾ? : ಯತ್ನಾಳ್

ವಿಜಯಪುರ : ಸ್ಟಾಲಿನ್ ಮುಖ್ಯಮಂತ್ರಿಯಾಗಬೇಕು ಎಂದಿದ್ದ ಸಿಎಂ ಸಿದ್ದರಾಮಯ್ಯರ ವಿಡಿಯೋವನ್ನು ಪೋಸ್ಟ್ ಮಾಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಒಂದು ಸ್ಪಷ್ಟವಾಗಿದೆ, ಇವರ ರಾಜಕೀಯಕ್ಕಾಗಿಯೇ ನಾಡಿನ ಹಿತದೃಷ್ಟಿಯನ್ನು ಲೆಕ್ಕಿಸದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಎಂದು xನಲ್ಲಿ ಪೋಸ್ಟ್​ ಮಾಡಿದ್ದಾರೆ.

ಸ್ಟಾಲಿನ್ ಹಾಗೂ ಡಿಎಂಕೆ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯನವರು ಸ್ಟಾಲಿನ್ ಮುಖ್ಯಮಂತ್ರಿಯಾಗಬೇಕು ಎಂದು ಮಾತನಾಡಿದ್ದರು. ಇವರ ಮೈತ್ರಿಕೂಟದ ಉಳಿವಿಗಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಆಗಬಹುದಾದರೆ, ಕಾವೇರಿ ನೀರಿನ ವಿಷಯದಲ್ಲಿ ಮಾತನಾಡುವುದು ಸಾಧ್ಯವಿಲ್ಲವಾ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?

ಎಐಎಡಿಎಂಕೆ ಸರ್ಕಾರವನ್ನು ಕಿತ್ತೊಗೆದು ಡಿಎಂಕೆ ಹಾಗೂ ಮಿತ್ರ ಪಕ್ಷಗಳ ಸರ್ಕಾರವನ್ನು ತಮಿಳುನಾಡಿನಲ್ಲಿ ತರಬೇಕು. ಸ್ಟಾಲಿನ್ ಅವರು ಮುಖ್ಯಮಂತ್ರಿ ಆಗುವಂತಹ ಅವಕಾಶ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments