Monday, August 25, 2025
Google search engine
HomeUncategorizedಹಾಡಹಗಲೇ ಬಾಲಕನನ್ನು ಕೊಂದು ತಿಂದ ಹುಲಿ

ಹಾಡಹಗಲೇ ಬಾಲಕನನ್ನು ಕೊಂದು ತಿಂದ ಹುಲಿ

ಮೈಸೂರು : ಮರದ ಕೆಳಗೆ ಕುಳಿತಿದ್ದ ಬಾಲಕನನ್ನು ಹಾಡು ಹಗಲೇ ಕೊಂದು ತಿಂದ ಹುಲಿ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ನಡೆದಿದೆ.

ಪೋಷಕರ ಜೊತೆಯಲ್ಲಿ ಜಮೀನಿಗೆ ತೆರಳಿದ್ದ ಕೃಷ್ಣನಾಯಕ ಪುತ್ರ ಚರಣ್ (7) ಮೃತ ಬಾಲಕ. ಎಂಬುವ ಬಾಲಕ ಪೋಷಕರು ಕೆಲಸ ಮಾಡುತ್ತಿದ್ದ ಹಿನ್ನೆಲೆ ವಿಶ್ರಾಂತಿಗಾಗಿ ಒಂದು ಮರದ ಕೆಳಗೆ ಕುಳಿತಿದ್ದನು. ಈ ವೇಳೆ ಬಾಲಕನ ಬಳಿ ಬಂದ ಹುಲಿಯೊಂದು ದಾಳಿ ಮಾಡಿದೆ. ಬಳಿಕ ಕೆಲಸದ ನಡುವೆ ಪೋಷಕರು ನೋಡಿದಾಗ ಕ್ಷಣದಲ್ಲೇ ಕಣ್ಮರೆಯಾದ ಬಾಲಕ.

ಇದನ್ನು ಓದಿ : ದಯಾಮರಣಕ್ಕೆ ಅನುಮತಿ ಕೋರಿ ಡಿಸಿಗೆ ಪತ್ರ ಬರೆದ ಬಾಣಂತಿ

ಗಾಬರಿಗೊಂಡ ಪೋಷಕರು ಜಾಡು ಹುಡುಕಿಕೊಂಡು ಹೋದಾಗ ಸ್ವಲ್ಪ ದೂರದಲ್ಲಿ ಬಾಲಕನನ್ನು ಹುಲಿ ತಿಂದು ಹಾಕಿರುವುದು ಕಣ್ಣಿಗೆ ಬೀಳುತ್ತದೆ. ಈ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದರು. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅರಣ್ಯ ಇಲಾಖೆಯವರ ಗೈರಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments