Friday, September 12, 2025
HomeUncategorizedಕಮಲದ ಹೂವು ಪ್ರತಿ ಕ್ಷೇತ್ರ, ಪ್ರತಿ ಮತಗಟ್ಟೆಯ ಮೇಲೆ ಅರಳಬೇಕು : ಪ್ರಧಾನಿ ಮೋದಿ

ಕಮಲದ ಹೂವು ಪ್ರತಿ ಕ್ಷೇತ್ರ, ಪ್ರತಿ ಮತಗಟ್ಟೆಯ ಮೇಲೆ ಅರಳಬೇಕು : ಪ್ರಧಾನಿ ಮೋದಿ

ಮಧ್ಯಪ್ರದೇಶ : ‘ನಾನು ಯುವ ಗೆಳೆಯರಿಗೆ ಹೇಳುತ್ತೇನೆ. ಬರುವ ಸಮಯ ನಿಮ್ಮದಾಗಿದೆ. ಕಮಲದ ಹೂವು ಪ್ರತಿ ಕ್ಷೇತ್ರ ಹಾಗೂ ಪ್ರತಿ ಮತಗಟ್ಟೆಯ ಮೇಲೆ ಪೂರ್ಣ ಬಲದಿಂದ ಅರಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಮಧ್ಯಪ್ರದೇಶದ ನೀಮುಚ್‌ನಲ್ಲಿ ಬೃಹತ್ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರದ ದುರಾಸೆಯಲ್ಲಿ ಕಾಂಗ್ರೆಸ್ ಸದಾ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ನ ತಂತ್ರಗಳು ದೇಶದಲ್ಲಿ ಭಯೋತ್ಪಾದನೆ ಮತ್ತು ಅರಾಜಕತೆಯನ್ನು ಉತ್ತೇಜಿಸಿದೆ ಎಂದು ಗುಡುಗಿದರು.

ಮಹಿಳೆಯರ ಸಬಲೀಕರಣಕ್ಕಾಗಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರವೂ ಅದ್ಭುತ ಕೆಲಸ ಮಾಡಿದೆ. ಇದಕ್ಕೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಲಾಡ್ಲಿ ಬ್ರಾಹ್ಮಣ ಮತ್ತು ಲಾಡ್ಲಿ ಲಕ್ಷ್ಮಿ ಯೋಜನೆಯಿಂದ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸಾಕಷ್ಟು ಸಹಾಯ ಸಿಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ರಹಸ್ಯ ಒಪ್ಪಂದ ಮಾಡಿಕೊಂಡಿದೆ

ದೇಶದಲ್ಲಿ ಅಸ್ಥಿರತೆ ಮತ್ತು ಅರಾಜಕತೆಯನ್ನು ಹರಡಲು ಕಾಂಗ್ರೆಸ್ ಬಯಸುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ಯಾರಿಗೂ ತಿಳಿಯದ ರಹಸ್ಯ ಒಪ್ಪಂದ ಮಾಡಿಕೊಂಡಿದೆ. ಭಾರತದ ವಿರುದ್ಧ ಬಹಿರಂಗವಾಗಿ ಪಿತೂರಿ ಮಾಡುವ ವಿದೇಶದಿಂದ ಬಂದವರ ಜೊತೆ ಕಾಂಗ್ರೆಸ್ ಈಗ ನಿಂತಂತೆ ಕಾಣುತ್ತಿದೆ. ಹಾಗಾಗಿ ಮಧ್ಯಪ್ರದೇಶದ ಜನರು ಕಾಂಗ್ರೆಸ್ ಬಗ್ಗೆ ಬಹಳ ಎಚ್ಚರದಿಂದ ಇರಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಕುಟುಕಿದರು.

ಕಾಂಗ್ರೆಸ್ ಸರಕಾರವಿದ್ದಾಗ ದೇಶ 2ಜಿ ಹಗರಣದಲ್ಲಿ ಮುಳುಗಿತ್ತು. ಇಂದು ಬಿಜೆಪಿ ಆಡಳಿತದಲ್ಲಿ ದೇಶ 5ಜಿ ವೇಗದಲ್ಲಿ ಮುನ್ನಡೆಯುತ್ತಿದೆ. ಇಂದು ಭಾರತದ ಡಿಜಿಟಲ್ ಕ್ರಾಂತಿಯನ್ನು ಪ್ರಪಂಚದಾದ್ಯಂತ ಚರ್ಚಿಸಲಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments