Thursday, August 28, 2025
HomeUncategorizedಮ್ಯೂಸಿಕ್​​ ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಸ್ವಾಮೀಜಿ ಮೇಲೆ ಹಲ್ಲೆ

ಮ್ಯೂಸಿಕ್​​ ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಸ್ವಾಮೀಜಿ ಮೇಲೆ ಹಲ್ಲೆ

ಹಾವೇರಿ: ಟ್ರ್ಯಾಕ್ಟರ್​​​ನಲ್ಲಿ ಹಾಡಿನ ಸೌಂಡ್ ಕಡಿಮೆ ಇಟ್ಟುಕೊಂಡು ಹೋಗುವಂತೆ ಹೇಳಿದ್ದಕ್ಕೆ ಸ್ವಾಮೀಜಿ ಮೇಲೆ ಹಲ್ಲೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ಕೃಷ್ಣಾಪುರ ಗ್ರಾಮದಲ್ಲಿರುವ ಬಂಜಾರ ಗುರುಪೀಠದ ಕುಮಾರ ಮಹಾರಾಜ ಸ್ವಾಮೀಜಿ ಮೇಲೆ ಹಲ್ಲೆ. ಗುರುಪೀಠದ ಮುಂದೆ ಹಾಯ್ದು ಹೋಗುತ್ತಿದ್ದ ವೇಳೆ ಪೂಜೆಗೆ ತೊಂದರೆ ಆಗುತ್ತದೆ, ಸೌಂಡ್ ಕಡಿಮೆ ಇಟ್ಟುಕೊಂಡು ಹೋಗಿ ಅಂತ ಬುದ್ಧಿವಾದ ಹೇಳಿದ್ದಾರೆ.

ಇದಕ್ಕೆ ಕೋಪಗೊಂಡು ಸ್ವಾಮೀಜಿಯನ್ನು ಗುರುಪೀಠದ ಪಕ್ಕದ ಜಮೀನಿಗೆಕರೆಯಿಸಿ ಅವಾಚ್ಯ ಪದಗಳಿಂದ ಬೈದು, ಹೊಡೆದು ಹಲ್ಲೆ ಮಾಡಿದ್ದಾರೆ.

ಈ ಹಿನ್ನೆಲೆ ಸ್ವಾಮೀಜಿಯು ಕೃಷ್ಣಾ, ಸುರೇಶ, ಪುಟ್ಟಪ್ಪ ಮತ್ತು ದ್ಯಾಮಣ್ಣ ಎಂಬುವರ ವಿರುದ್ಧ ಹಲ್ಲೆ, ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ.

ಈ ಪ್ರಕರಣವು ಸವಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES
- Advertisment -
Google search engine

Most Popular

Recent Comments