Saturday, August 23, 2025
Google search engine
HomeUncategorizedವಿಜಯೇಂದ್ರಗೆ ಗೆಲುವಿನ ಸೂತ್ರ ಹೇಳಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

ವಿಜಯೇಂದ್ರಗೆ ಗೆಲುವಿನ ಸೂತ್ರ ಹೇಳಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

ಬೆಂಗಳೂರು : ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾಜಿ‌ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಎಸ್​.ಎಂ ಕೃಷ್ಣ ಅವರು ವಿಜಯೇಂದ್ರಗೆ ಗೆಲುವಿನ ಸೂತ್ರದ ಬಗ್ಗೆ ತಿಳಿಸಿದರು.

ವಿಜಯೇಂದ್ರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಬಿಜೆಪಿ ‌ಅಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಆಗಿದ್ದಾರೆ. ಅವರನ್ನ ಹಾರ್ದಿಕವಾಗಿ‌ ಅಭಿನಂದಿಸುತ್ತೇನೆ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಅವರು ಕಳೆದ ‌ಹತ್ತಾರು‌ ವರ್ಷಗಳಿಂದ‌ ಬಿಜೆಪಿಯನ್ನ ಭದ್ರ ಬುನಾದಿಯಾಗಿ‌ ಕಟ್ಟಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಹಾಗೂ ಸ್ಥಳೀಯ ಚುನಾವಣೆಯಲ್ಲಿ ವಿಜಯೇಂದ್ರ ‌ತಮ್ಮ ಛಾಪು‌ ಒತ್ತಿ ತೋರಿಸಬೇಕಿದೆ. ಅಂತಹ ‌ಜವಬ್ದಾರಿ‌ ವಿಜಯೇಂದ್ರ ಮೇಲಿದೆ ಎಂದು ಬಿವೈವಿ ಮುಂದಿರುವ ಜವಾಬ್ದಾರಿಯನ್ನು ಮನನ ಮಾಡಿದರು.

ನಡ್ಡಾ, ಶಾ‌ ಅವರನ್ನ ಗುರುತಿಸಿದ್ದಾರೆ

ಜೆ.ಪಿ ನಡ್ಡಾ, ‌ಅಮಿತ್ ಶಾ ಅವರು ವಿಜಯೇಂದ್ರರ ನಾಯಕತ್ವದ ಗುಣವನ್ನು ಗುರುತಿಸಿದ್ದಾರೆ. ಅವರಿಗೆ‌ ಎಲ್ಲಾ‌ ವಿಧವಾದ‌ ಯಶಸ್ಸು ಸಿಗಲಿ. ಈಗಷ್ಟೇ ಅವರು ರಾಜ್ಯಾಧ್ಯಕ್ಷರಾಗಿದ್ದಾರೆ, ಆಗಿಂದಾಗ್ಗೆ ಅವರನ್ನು ಭೇಟಿಯಾಗ್ತೇನೆ. ಜನರೇಷನಲ್‌ ಚೇಂಜ್ ಅದು ಪ್ರಕೃತಿ ನಿಯಮ. ಅದರ ‌ಜೊತೆ ‌ಸಮನ್ವಯ ಸಾಧಿಸಿಕೊಂಡು ‌ಹೋಗಬೇಕು. ಯುವ ಪ್ರತಿಭೆಗಳು ಹೊರಹೊಮ್ಮಬೇಕು. ಅವರ‌ ಜೊತೆ‌ಗೆ ಹೆಗಲು ಜೋಡಿಸಿ ಕೆಲಸ ಮಾಡಬೇಕು ಎಂದು ಎಸ್.ಎಂ ಕೃಷ್ಣ ತಮ್ಮ ರಾಜಕೀಯ ಅನುಭವವನ್ನು ಧಾರೆಯೆರೆದರು.

ದಕ್ಷ ಆಡಳಿತಕ್ಕೆ ಹೆಸರಾದ ನಾಡುಕಂಡ ಶ್ರೇಷ್ಠ ರಾಜಕಾರಣಿ ಮಾಜಿ‌ ಮುಖ್ಯಮಂತ್ರಿಗಳಾದ ಶ್ರೀ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು. ಅಪಾರ ಅನುಭವವುಳ್ಳ ಹಿರಿಯ ಮುತ್ಸದ್ದಿಗಳಾಗಿರುವ ತಾವು ಮಾರ್ಗದರ್ಶನ ಮಾಡಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಎಂ.ಕೃಷ್ಣಪ್ಪನವರು, ಶ್ರೀ ಸಿ.ಕೆ.ರಾಮಮೂರ್ತಿ ಅವರು… pic.twitter.com/xpYMWqixpp

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments