Friday, September 12, 2025
HomeUncategorizedಮಳೆಯ ನಡುವೆಯೂ ಬಿರುಸಿನ ಮತದಾನ

ಮಳೆಯ ನಡುವೆಯೂ ಬಿರುಸಿನ ಮತದಾನ

ಚಾಮರಾಜನಗರ: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಹಲವು ಪ್ರದೇಶಗಳಲ್ಲಿ ಮಳೆಯ ನಡುವೆಯೂ ಬಿರುಸಿನ ಮತದಾನ ಮುಂದುವರಿದಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಇದೀಗ ಮಳೆ ಬಂದಿರುವುದರಿಂದ ಮತದಾನಕ್ಕೆ ಅಡ್ಡಿಯಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಲವೆಡೆ ಮಳೆಯಾಗಿದ್ದು, ಮಳೆಯ ನಡುವೆಯೇ ಮತದಾರರು ಬಂದು ಮತ ಚಲಾಯಿಸಿದ್ದಾರೆ. ಬೊಮ್ಮಲಾಪುರ, ಕೊಡಸೋಗೆ, ಯಾನಗಳ್ಳಿ, ಬೊಮ್ಮನಹಳ್ಳಿ, ಅರಕಲವಾಡಿ ಪ್ರದೇಶದಲ್ಲಿಯೂ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯ ನಡುವೆಯೂ ಜನ ಮತ ಚಲಾಯಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments