Tuesday, August 26, 2025
Google search engine
HomeUncategorizedಚನ್ನಪಟ್ಟಣ ಗೆದ್ದರು ತಮ್ಮನ ಸೋಲನ್ನು ಜೀರ್ಣಿಸಿಕೊಳ್ಳದ ಡಿ.ಕೆ. ಶಿವಕುಮಾರ್​​ ..!

ಚನ್ನಪಟ್ಟಣ ಗೆದ್ದರು ತಮ್ಮನ ಸೋಲನ್ನು ಜೀರ್ಣಿಸಿಕೊಳ್ಳದ ಡಿ.ಕೆ. ಶಿವಕುಮಾರ್​​ ..!

ದೆಹಲಿ : ಡಿ.ಕೆ ಶಿವಕುಮಾರ್​ ಇತ್ತೀಚೆಗೆ ನಡೆಸಿದ ಖಾಸಗಿ ವಾಹಿನಿಯ ಸಂಧರ್ಶನದಲ್ಲಿ ಭಾಗವಹಿಸಿದ್ದು. ಈ ಸಂದರ್ಶನದಲ್ಲಿ ತನ್ನ ತಮ್ಮ ಡಿ. ಸುರೇಶ್​​ ಸೋಲಿನ ನೋವನ್ನು ಇನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ತಮ್ಮ ಅಂತರಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.

ಡಿ.ಕೆ ಸುರೇಶ್​ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್​, ನನ್ನ ತಮ್ಮನ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲ, ಈಗಲೂ ಸುರೇಶ್​​ ಸೋಲಿನ ಬಗ್ಗೆ ಅನುಮಾನವಿದೆ, ಆದರೆ ಅದನ್ನು ಒಪ್ಪಿಕೊಳ್ಳಲೇಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ತಮ್ಮ ಸೋಲುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ‘ ಕುಮಾರಸ್ವಾಮಿ ಮತ್ತು ದೇವೇಗೌಡರ ಪಿತೂರಿಯಿಂದ ನಾವು ಸೋಲಬೇಕಾಯಿತು, ಎದುರಾಳಿ ಅಭ್ಯರ್ಥಿ ಮಂಜುನಾಥ್​ ದೇವೇಗೌಡರ ಕುಟುಂಬದವರಾದರು ಕೂಡ ಅವರು ಬಿಜೆಪಿ ಚಿನ್ಹೆಯಿಂದ ಸ್ಪರ್ಧೆ ಮಾಡುವ ಮೂಲಕ ಪಿತೂರಿ ಮಾಡಿದರು, ಅದರಿಂದ ಸೋಲಬೇಕಾಯಿತು, ಆದರೆ ಕಳೆದ 2019ರ ಚುನಾವಣೆಯಲ್ಲಿ ನಾವು ಇದೇ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದೆವು ಎಂದು ಹೇಳಿದ್ದರು.

ಚನ್ನಪಟ್ಟಣ ಗೆಲುವಿನಿಂದಲೂ ಅರಗಿಲ್ಲ ಡಿ.ಕೆ ನೋವು !

ಸಾಮಾನ್ಯವಾಗಿ ಈ ಬಾರಿಯ ಉಪಚುನಾವಣೆಯಲ್ಲಿ ರಾಜ್ಯದ ಕುತೂಹಲದ ಕೇಂದ್ರವಾಗಿದ್ದ ಚನ್ನಪಟ್ಟಣದಲ್ಲಿ. ಕಾಂಗ್ರೆಸ್​ ಗೆದ್ದಿ ಬೀಗಿದೆ. ಚುನಾವಣ ಕಣದಲ್ಲಿ ನಿಖಿಲ್​ ಮತ್ತು ಯೋಗೇಶ್ವರ್​ ಎದುರಾಳಿಗಳಾಗಿದ್ದರು ಕೂಡ ಪರೋಕ್ಷವಾಗಿ ಈ ಚುನಾವಣೆ ಡಿ.ಕೆ ಶಿವಕುಮಾರ್​ ಮತ್ತು ಕುಮಾರಸ್ವಾಮಿ ನಡುವೆ ನಡೆದಿತ್ತು.

ಈ ಚುನಾವಣೆಯು ಮುಗಿದು ಫಲಿತಾಂಶವು ಬಂದಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಯೋಗೇಶ್ವರ್​ ಗೆದ್ದು ಬೀಗಿದ್ದಾರೆ. ಈ ಚುನಾವಣೆಯ ಫಲಿತಾಂಶದ ಮೂಲಕ ಡಿ.ಕೆ ತಮ್ಮನ ಸೋಲಿನ ಸೇಡನ್ನು ತೀರಿಸಿಕೊಂಡರು ಎಂದು ಚರ್ಚೆ ಮಾಡಲಾಗುತ್ತಿತ್ತು. ಆದರೆ ಖಾಸಗಿ ವಾಹಿನಿಯಲ್ಲಿ ನಡೆದ ಸಂಧರ್ಶನದಲ್ಲಿ ಡಿ.ಕೆ ಶಿವಕುಮಾರ್ ತಮ್ಮನ ಸೋಲನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments