Tuesday, September 2, 2025
HomeUncategorizedವೈದ್ಯರ ನಿರ್ಲಕ್ಷಕ್ಕೆ ವೃದ್ದೆ ಸಾ*ವು : ವೈದ್ಯರ ಮೇಲೆ ಕುಟುಂಬಸ್ಥರಿಂದ ಹ*ಲ್ಲೆ

ವೈದ್ಯರ ನಿರ್ಲಕ್ಷಕ್ಕೆ ವೃದ್ದೆ ಸಾ*ವು : ವೈದ್ಯರ ಮೇಲೆ ಕುಟುಂಬಸ್ಥರಿಂದ ಹ*ಲ್ಲೆ

ಬೀದರ್ : ಲೋ ಬಿಪಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆಯೊಬ್ಬರು ಸಾವನ್ನಪ್ಪಿದ್ದು. ವೈದ್ಯರ ನಿರ್ಲಕ್ಷದಿಂದಲೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ.

ನಾಗಮ್ಮ ನರಸಪ್ಪ ಎಂಬ 73 ವರ್ಷದ ಮಹಿಳೆಯೊಬ್ಬರು ಲೋ ಬಿಪಿ ಸಮಸ್ಯೆಯಿಂದ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ವೃದ್ದೆ ಸಾವನ್ನಪ್ಪಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣಕ್ಕೆ ವೃದ್ದೆಯು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ ಕುಟುಂಬಸ್ಥರು ದುಬಲಗುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಶರಣಬಸವ ಎನ್ನುವ  ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಮತ್ತು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ ಕುಟುಂಬಸ್ಥರು ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments