Tuesday, September 9, 2025
HomeUncategorized``ಗಾಂಧಿ ಹತ್ಯೆಗೆ ಸಾವರ್ಕರ್ ಸಂಚು'' : ವಿವಾದದ ಕಿಡಿ ಹೊತ್ತಿಸಿದ ಸಿದ್ದರಾಮಯ್ಯ !

“ಗಾಂಧಿ ಹತ್ಯೆಗೆ ಸಾವರ್ಕರ್ ಸಂಚು” : ವಿವಾದದ ಕಿಡಿ ಹೊತ್ತಿಸಿದ ಸಿದ್ದರಾಮಯ್ಯ !

ಮಂಗಳೂರು : ವೀರ ಸಾವರ್ಕರ್​​ ಅವರಿಗೆ ಭಾರತರತ್ನ ನೀಡುವ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆರಳಿದ್ದಾರೆ. ಅಷ್ಟೇ ಅಲ್ಲದೆ ಮಾತಿನ ಭರದಲ್ಲಿ ಸಾವರ್ಕರ್​ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ”ಬಿಜೆಪಿಯನ್ನು ಟೀಕಿಸುವ ಅವಸರದಲ್ಲಿ ಸಿದ್ದರಾಮಯ್ಯ, ಮಹಾತ್ಮ ಗಾಂಧಿ ಹತ್ಯೆಗೆ ಗೋಡ್ಸೆ ಹಿಂದೆ ನಿಂತು ವೀರ ಸಾವರ್ಕರ್ ಹಿಂದೆ ನಿಂತು ಸಂಚು ರೂಪಿಸಿದ್ರು. ಸೂಕ್ತ ಸಾಕ್ಷ್ಯ ಇಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ ಅಷ್ಟೇ” ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಸಾವರ್ಕರ್​ಗೆ ಭಾರತ ರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತರತ್ನ ಕೊಟ್ಟು ಬಿಡಲಿ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments