Wednesday, August 27, 2025
Google search engine
HomeUncategorizedಕೇಂದ್ರ ಬಜೆಟ್; ರಾಮಲಿಂಗಾರೆಡ್ಡಿ ಕಿಡಿ

ಕೇಂದ್ರ ಬಜೆಟ್; ರಾಮಲಿಂಗಾರೆಡ್ಡಿ ಕಿಡಿ

ಬೆಂಗಳೂರು: ಕೇಂದ್ರ ಬಜೆಟ್​ ಮಂಡನೆ ನಂತರ ಯಥಾಪ್ರಕಾರ ಬಿಜೆಪಿ ಮುಖಂಡರು ಅದ್ಭುತ ಎಂದು ಸ್ವಾಗತಿಸಿದರೆ, ಪ್ರತಿಪಕ್ಷಗಳು ಇದೊಂದು ಡಬ್ಬಾ ಬಜೆಟ್ ಎಂದು ಕಿಡಿಕಾರಿದ್ದಾರೆ. ಹೀಗೆ ಕೇಂದ್ರ ಬಜೆಟ್ ಬಗ್ಗೆ ಕರ್ನಾಟಕದ ಕೆಪಿಸಿಸಿ ಕಾರ್ಯಾದ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಈ ಬಜೆಟ್​ನಲ್ಲಿ ತೆರಿಗೆ ಮುಂದುವರೆಸಲಾಗಿದೆ. ಇದರಿಂದ ಜನರಿಗೆ ಮತ್ತಷ್ಟು ಸಂಕಷ್ಟವಾಗಲಿದೆ. ಈ ಬಾರಿ ಜನಸಾಮಾನ್ಯರಿಗೆ ಏನಾದರೂ ಕೊಡುಗೆ ಸಿಗುತ್ತೆ ಎಂಬ ನಿರೀಕ್ಷೆಯಿತ್ತು. 8 ಲಕ್ಷ ಕೋಟಿ ದೊಡ್ಡವರ ಸಾಲ ಮನ್ನಾ ಮಾಡಿದ್ದಾರೆ. ರೈತರು ಮತ್ತು ಬಡವರಿಗೆ ಹೊಸ ಕಾರ್ಯಕ್ರಮವಿಲ್ಲ. ಶ್ರೀಮಂತರ ಆದಾಯ ತೆರಿಗೆ ಕಡಿತ ಮಾಡಲಾಗಿದೆ. ಬಡವರ ಮೇಲೆ ತೆರಿಗೆ ಭಾರ ಮುಂದುವರೆಸಿದ್ದಾರೆ ಎಂದು ಕೇಂದ್ರ ಬಜೆಟ್ ಬಗ್ಗೆ ರಾಮಲಿಂಗಾರೆಡ್ಡಿ ಕಿಡಿ ಕಾರಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments