Sunday, August 24, 2025
Google search engine
HomeUncategorizedಪತ್ನಿಯನ್ನು ತುಂಡು-ತುಂಡು ಮಾಡಿದ್ದ ಪತಿ ಪುಣೆಯಲ್ಲಿ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನ

ಪತ್ನಿಯನ್ನು ತುಂಡು-ತುಂಡು ಮಾಡಿದ್ದ ಪತಿ ಪುಣೆಯಲ್ಲಿ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನ

ಪುಣೆ: ಬೆಂಗಳೂರಿನ ಹುಳಿಮಾವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡರಿಸಿ ಸೂಟ್​ಕೇಸ್​ಗೆ ತುಂಬಿದ್ದ ಸೈಕೋ ಪತಿ ಪುಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಕೊಲೆ ಆರೋಪಿ ರಾಕೇಶ್​ ಮತ್ತು ಗೌರಿ ಅನಿಲ್ ಸಾಂಬೇಕರ್ ಇಬ್ಬರು ಕಮ್ಮನಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ ಕಳೆದ ಬುಧವಾರ ರಾತ್ರಿ ಕೆಲಸದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಪತಿ ಮೇಲೆ ಮೃತ ಗೌರಿ ಚಾಕು ಎಸೆದಿದ್ದಳು. ಈ ವೇಳೆ ಉದ್ರಿಕ್ತನಾದ ರಾಕೇಶ್​ ಅದೇ ಚಾಕುವಿನಿಂದ ಪತ್ನಿಯ ಹತ್ಯೆ ಮಾಡಿದ್ದನು.

ನಂತರ ಆಕೆಯ ಕತ್ತು ಮತ್ತು ಹೊಟ್ಟೆ ಕತ್ತರಿಸಿ ಸೂಟ್​ಕೇಸ್​ಗೆ ತುಂಬಿದ ರಾಕೇಶ್​, ಪತ್ನಿಯ ಮೊಬೈಲ್​ ಸ್ವಿಚ್​​ ಆಫ್​ ಮಾಡಿ ಮನೆಯಲ್ಲೇ ಊಟ ಮಾಡಿ ಮೃತದೇಹವನ್ನು ಸಾಗಿಸುವ ಪ್ಲಾನ್​ ಮಾಡಿದ್ದ. ಆದರೆ ಅದು ಸಾಧ್ಯವಾಗದ ಹಿನ್ನಲೆ. ಮನೆಯ ಬಾತ್ ರೂಂನಲ್ಲೇ ಮೃತದೇಹ ಇಟ್ಟು ರಾಕೇಶ್​ ಪರಾರಿಯಾಗಿದ್ದನು.

ಇದನ್ನೂ ಓದಿ :ಪೊಲೀಸ್​ ಠಾಣೆಯಲ್ಲಿ ಅನ್ಯಕೋಮಿನ ಯುವತಿಯನ್ನು ಮದುವೆಯಾಗ ಹಿಂದೂ ಯುವಕ..!

ಪತ್ನಿಯನ್ನು ಹತ್ಯೆ ಮಾಡಿದ 16 ಗಂಟೆಗಳ ಬಳಿಕ ಆರೋಪಿ ರಾಕೇಶ್​ ಪಕ್ಕದ ಮನೆಯ ಬಾಡಿಗೆದಾರನಿಗೆ ಕರೆ ಮಾಡಿ ವಿಚಾರ ಹೇಳಿದ್ದು. ನಂತರ ಪತ್ನಿಯ ಕುಟುಂಬಸ್ಥರಿಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದನು. ಆದರೆ ಬಾಡಿಗೆ ಮನೆಯವರು ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದು. ಮಾಹಿತಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆದರೆ ಆರೋಪಿ ರಾಕೇಶ್​ ಕೊಲೆ ಮಾಡಿದ ನಂತರ ಪುಣೆಗೆ ಹೋಗಿದ್ದು. ಪುಣೆಯ ಶಿರ್ವಾಲ್​ ಪೊಲೀಸ್​ ಠಾಣೆ ಬಳಿ ಅಸ್ವಸ್ಥನಾಗಿ ಬಿದ್ದದ್ದನು. ಇದನ್ನು ನೋಡಿದ ಶಿರ್ವಾಲ್​ ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿಯನ್ನು ಕರೆತರಲು ಹುಳಿಮಾವು ಪೊಲೀಸರು ಪುಣೆಗೆ ಹೋಗಿದ್ದು. ಇಂದು (ಶುಕ್ರವಾರ) ಬೆಂಗಳೂರಿಗೆ ಕರೆತರುವುದು ಅನುಮಾನವಾಗಿದೆ. ಪುಣೆ ಪೊಲೀಸರು ಆರೋಪಿಯಿಂದ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಕೇಶ್ ಹತ್ಯೆ ಮಾಡಿ ಪರಾರಿಯಾಗಿದ್ದ ಬಗ್ಗೆ ಸಿಡಿಆರ್ ಆಧರಿಸಿ ಹುಳಿಮಾವು ಪೊಲೀಸರು ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಹುಳಿಮಾವು ಪೊಲೀಸರ ತಂಡ ಪುಣೆಗೆ ತೆರಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments