Friday, August 22, 2025
Google search engine
HomeUncategorizedಮೈಸೂರಿಗೆ ಹೋಗಲು ಅನುಮತಿ ನೀಡಿದ ನ್ಯಾಯಾಲಯ : ಫಾರ್ಮಹೌಸ್​ನಲ್ಲಿ ದಾಸನ ಸಂಕ್ರಾಂತಿ !

ಮೈಸೂರಿಗೆ ಹೋಗಲು ಅನುಮತಿ ನೀಡಿದ ನ್ಯಾಯಾಲಯ : ಫಾರ್ಮಹೌಸ್​ನಲ್ಲಿ ದಾಸನ ಸಂಕ್ರಾಂತಿ !

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್​ಗೆ ನ್ಯಾಯಾಲಯ 5 ದಿನಗಳ ಕಾಲ ಮೈಸೂರಿಗೆ ತೆರಳಲು ಅವಕಾಶ ನೀಡಿದ್ದು. ಈ ಬಾರಿಯ ಸಂಕ್ರಾಂತಿಯನ್ನು ನಟ ದರ್ಶನ್​ ತನ್ನ ಫಾರ್ಮಹೌಸ್​ನಲ್ಲಿಯೇ ಆಚರಿಸಲಿದ್ದಾರೆ.

ಕೊಲೆ ಪ್ರಕರಣದಲ್ಲಿ ಇಂದು ನ್ಯಾಯಾಲಯಕ್ಕೆ ಬಂದು ವಿಚಾರಣೆ ಎದುರಿಸಿದ ನಟ ದರ್ಶನ್​ ಮತ್ತು ಗ್ಯಾಂಗ್​ನ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 25ಕ್ಕೆ ಮುಂದೂಡಿದೆ. ಇದರ ಜೊತೆಗೆ ನಟ ದರ್ಶನ್​ ಮತ್ತೆ ಮೈಸೂರಿಗೆ ತೆರಳಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ದರ್ಶನ್​ಗೆ ಮೈಸೂರಿಗೆ ತೆರಳಲು ಅವಕಾಶ ನೀಡಿದೆ.

ಇದನ್ನು ಓದಿ : ನನ್ನ ಮೇಲೂ ವಾಮಾಚಾರ ನಡೆದಿದೆ, ಆದರೆ ಇದರ ಮೇಲೆ ನನಗೆ ನಂಬಿಕೆ ಇಲ್ಲ: ಕೆ.ಎನ್​ ರಾಜಣ್ಣ

ಇದೇ ಜನವರಿ 12ರಿಂದ 5 ದಿನಗಳ ಕಾಲ ಮೈಸೂರಿಗೆ ಹೋಗಲು ಅನುಮತಿ ನೀಡುವಂತೆ ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು. ದರ್ಶನ್​ ಪರವಾಗಿ ವಾದ ಮಂಡಿಸಿದ ವಕೀಲ ಸುನೀಲ್​ ಕುಮಾರ್​ ದರ್ಶನ್​ಗೆ ಸಂಕ್ರಾಂತಿಯ ಉಡುಗೊರೆ ನೀಡಿದ್ದಾರೆ.

ಪವಿತ್ರಾಗೂ ಮುಂಬೈಗೆ ತೆರಳಲು ಅವಕಾಶ ನೀಡಿದ ನ್ಯಾಯಾಲಯ !

ದರ್ಶನ್​ ಜೊತೆಗೆ ಪವಿತ್ರ ಗೌಡಾಗೂ ಬೆಂಗಳೂರು ಬಿಟ್ಟು ಹೊರಗೆ ಹೋಗಲು ಅನುಮತಿ ನೀಡಿದ್ದು. ಮುಂಬೈ ಅಥವಾ ದೆಹಲಿಗೆ ತೆರಳಲು ಅವಕಾಶ ನೀಡಲಾಗಿದೆ. ದೇವಸ್ಥಾನ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ವಿಶಯಗಳಿಗೆ ಅನುಮತಿ ನೀಡಿದೆ.

ಪವಿತ್ರಾ ಗೌಡ ರೆಡ್ ಕಾರ್ಪೆಟ್ ಶೋರೂಂಗೆ ರಾ ಮೆಟಿರಿಯಲ್ ತರಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಈ ವಿಚಾರಣೆಯನ್ನು ನಡೆಸಿರುವ ನ್ಯಾಯಾಲಯ ಅವಕಾಶ ನೀಡಿದೆ. ಈ ಶೋರೂಂ ನಗರದ ಆರ್​.ಆರ್​ ನಗರದಲ್ಲಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments