Tuesday, August 26, 2025
Google search engine
HomeUncategorizedCWMA ಆದೇಶದಲ್ಲಿ ಒಳ್ಳೆಯ ತೀರ್ಪು ಬರಲಿ : ರೈತರ ಆಗ್ರಹ

CWMA ಆದೇಶದಲ್ಲಿ ಒಳ್ಳೆಯ ತೀರ್ಪು ಬರಲಿ : ರೈತರ ಆಗ್ರಹ

ಬೆಂಗಳೂರು : ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರಿದಿದೆ. ರೈತ ಹಿತರಕ್ಷಣಾ ಸಮಿತಿ ಹೋರಾಟ ನಿರಂತರವಾಗಿ ನಡೆಯುತ್ತಿದ್ದು, 39ನೇ ದಿನವೂ ಕಾವೇರಿ ಹೋರಾಟ ಮುಂದುವರಿದಿದೆ.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ನಡೆಯುತ್ತಿದೆ. ಮತ್ತೆ ತಮಿಳುನಾಡಿಗೆ ನೀರು ಬಿಡಲು CWRC ಆದೇಶಕ್ಕೆ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಸರ್ಕಾರ, ಸಂಸದರು, ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿದ್ದಾರೆ. ಇಂದಿನ CWMA ಆದೇಶದಲ್ಲಿ ಒಳ್ಳೆಯ ತೀರ್ಪು ಬರಲಿ. ರಾಜ್ಯ ಸರ್ಕಾರ ರೈತರನ್ನ ಕಡೆಗಣಿಸಿ ಅನ್ಯಾಯ ಮಾಡ್ತಿದೆ. ಇವತ್ತು ಕಡೆಯ ದಿನ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿ. ಇಲ್ಲದಿದ್ದರೆ ಇಂದು ಸಂಜೆ ಸಭೆ ನಡೆಸಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದ್ದಾರೆ.

ರೈತರ ಹೋರಾಟಕ್ಕೆ ರಾಜ್ಯ ಕಾಂಗ್ರೆಸ್​ ಸರ್ಕಾರದಿಂದ ಸ್ಪಂದಿಸುವ ಕೆಲಸ ಆಗುತ್ತಿಲ್ಲ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಕಾವೇರಿ ನೀರು ಮಾತ್ರ ನಿತ್ಯ ತಮಿಳುನಾಡಿಗೆ ಹರಿಯುತ್ತಿದೆ. ತಕ್ಷಣವೇ ಇಂದಿನ ಸಭೆಯಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments