Saturday, August 23, 2025
Google search engine
HomeUncategorizedಸಿಎಂ ಬದಲಾವಣೆ ಹೈಕಮಾಂಡ್​ಗೆ ಬಿಟ್ಟಿದ್ದು : ಸಚಿವ ಹೆಚ್​ಕೆ ಪಾಟೀಲ್

ಸಿಎಂ ಬದಲಾವಣೆ ಹೈಕಮಾಂಡ್​ಗೆ ಬಿಟ್ಟಿದ್ದು : ಸಚಿವ ಹೆಚ್​ಕೆ ಪಾಟೀಲ್

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ವಿಷಯ ವರಿಷ್ಠರಿಗೆ ಬಿಟ್ಟಿದ್ದು.ಅನಗತ್ಯವಾಗಿ ವಿವಾದ ಸೃಷ್ಟಿಸಿ ಸಮಯ ಹಾಳು ಮಾಡಬೇಡಿ ಎಂದು ಕಾನೂನು ಸಚಿವ ಹೆಚ್​.ಕೆ.ಪಾಟೀಲ್ ಹೇಳಿದರು.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್​.ಕೆ.ಪಾಟೀಲ್, ಸಿಎಂ ಜತೆ ಎಲ್ಲರೂ ವಿಶ್ವಾಸದಿಂದ ಇದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪರ್ಕದಲ್ಲೂ ಇದ್ದೇನೆ. ಪಕ್ಷದ ವಿಷಯವಾಗಿ ಹೈಕಮಾಂಡ್ ಸಂಪರ್ಕದಲ್ಲೂ ಇದ್ದೇನೆ. ಸಿಎಂ ಬದಲಾವಣೆ ಹೈಕಮಾಂಡ್​ಗೆ ಬಿಟ್ಟ ವಿಚಾರ ಇದರ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಪುಕ್ಕಲತನ, ಉದಾರ ಮನಸ್ಸು ಇಲ್ಲ : ಪ್ರತಾಪ್ ಸಿಂಹ

ಇನ್ನು ಡಿಸಿಎಂ ಡಿಕೆ ಬಗ್ಗೆ ಸಿಎಂ ಅಸಮಾಧಾನ ಎಂಬ ವದಂತಿ ವಿಚಾರವಾಗಿ ಮಾತನಾಡಿದ ಇವರು ಇದೆಲ್ಲ ಸುಳ್ಳು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸೃಷ್ಟಿಸಿದ್ದಾರೆ. ಜನರ ಗಮನ ಬೇರೆಡೆ ತಿರುಗಿಸಲು  ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments