Tuesday, August 26, 2025
Google search engine
HomeUncategorizedಕಟ್ಟಿಗೆ ತರಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ.!

ಕಟ್ಟಿಗೆ ತರಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ.!

ಕಾರವಾರ; ಕಟ್ಟಿಗೆ ತರಲು ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಮಹಿಳೆ ಓರ್ವಳು ಇದೀಗ ಶವ ಕೊಳೆತ ಸ್ಥಿತಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಂಗ್ರೆಯಲ್ಲಿ ಪತ್ತೆಯಾಗಿದೆ.

ಮಹಾದೇವಿ ದೇವಾಡಿಗ (57) ಮೃತ ಮಹಿಳೆಯಾಗಿದ್ದು, ಈಕೆ ಸೆಪ್ಟೆಂಬರ್ 17ರಂದು ಕಟ್ಟಿಗೆ ತರಲು ಬೆಂಗ್ರೆಯ ಅರಣ್ಯಕ್ಕೆ ಹೋಗಿದ್ದಳು ಎನ್ನಲಾಗಿದ್ದು, ಆಕೆ ಸಂಜೆ ಆದರು ಮನೆಗೆ ಬಾರದೆ ಇರುವುದರಿಂದ ಮಹಿಳೆಯ ಮನೆಯವರು ನಾಪತ್ತೆ ಆಗಿರುವ ಬಗ್ಗೆ ಸೆಪ್ಟೆಂಬರ್ 17ರಂದು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಳಿಕ ಪತ್ತೆ ಕಾರ್ಯ ನಡೆಸಿದ ಪೊಲೀಸರಿಗೆ ಇಂದು ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಗೆ ಬಿಪಿ ಹಾಗೂ ಶುಗರ್ ಖಾಯಿಲೆ ಒಳಗಾಗಿದ್ದಳು ಎನ್ನಲಾಗಿದ್ದು, ಇದರಿಂದಾಗಿ ಆಕೆ ಮೃತಪಟ್ಟಿರುವುದಾಗಿ ಹೇಳಗಾಗಿದೆ‌. ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular

Recent Comments