Tuesday, August 26, 2025
Google search engine
HomeUncategorizedಈಶ್ವರಪ್ಪ ಇಂತಹ ಕೆಲಸ ಮಾಡಿಲ್ಲ, ಗಾಬರಿಯಾಗಬೇಡಿ : ಯತ್ನಾಳ್

ಈಶ್ವರಪ್ಪ ಇಂತಹ ಕೆಲಸ ಮಾಡಿಲ್ಲ, ಗಾಬರಿಯಾಗಬೇಡಿ : ಯತ್ನಾಳ್

ವಿಜಯಪುರ :  ಕೇಂದ್ರದಲ್ಲಿ 7ವರ್ಷ ಆಡಳಿತ ನಡೆದರು ಒಂದು ಭ್ರಷ್ಟಾಚಾರ ಆರೋಪವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ್ದಾರೆ

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ವಿಚಾರ ಹಿನ್ನಲೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಆತ್ಮಹತ್ಯೆ ಪತ್ರ ಬರೆದಿದ್ದು ಹಿಂದೆ ಸಾಬೀತಾಗಿಲ್ಲ. ಅವರ ಬಳಿ ಏನು ದಾಖಲೆ ಇದೆ ಮೊದಲು ಕೊಡಲಿ ಎಂದರು.

ಇನ್ನು ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಮಂತ್ರಿ ಕೇಂದ್ರದಲ್ಲಿ ಇದ್ದಾರೆ. ಅವರು ನಾನು ತಿನ್ನಲ್ಲ, ಇನ್ನೊಬ್ಬರಿಗೆ ತಿನ್ನೋಕೆ ಬಿಡಲ್ಲ ಅಂದಿದ್ದಾರೆ. ಪ್ರಧಾನಿ ಅವರಿಗೆ ಒಂದು ವೇಳೆ ಸೂಕ್ತ ದಾಖಲೆ ಕೊಟ್ಟರೆ ಈಶ್ವರಪ್ಪ, ಯತ್ನಾಳ್ ಯಾಕೆ ಸಿಎಂ ಬೊಮ್ಮಾಯಿ ಸಹಿತ ಮನೆಗೆ ಕಳುಹಿಸುತ್ತಾರೆ.

ಅದುವಲ್ಲದೇ ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ. ಅದಕ್ಕೆ ಮುಖ್ಯಮಂತ್ರಿ ಕೂಡ ಬದಲಾಗಿದ್ದಾರೆ.  ಭ್ರಷ್ಟಾಚಾರಕ್ಕೆ ಸಿಎಂ ಬದಲಾಗಿದ್ದು, ಇದು ಮುಂದುವರೆದರೆ ಬೊಮ್ಮಾಯಿನೂ ಬದಲಾವಣೆ ಮಾಡುತ್ತಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಧಾನಿಯವರು ಗಟ್ಟಿಯಾಗಿದ್ದರೆ. ಹಾಗೂ ಈಶ್ವರಪ್ಪನವರು ಇಂತಹ ಕೆಲಸ ಮಾಡಲ್ಲ ನೀವೂ ಯಾರು ಗಾಬರಿಯಾಗಬೇಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments