Saturday, August 23, 2025
Google search engine
HomeUncategorizedಆಕಸ್ಮಿಕ ಬೆಂಕಿ 5 ಲಕ್ಷ ಮೌಲ್ಯದ ಕಬ್ಬಿನ ಬೆಳೆ ನಾಶ; ರೈತನ ಕಂಗಾಲು

ಆಕಸ್ಮಿಕ ಬೆಂಕಿ 5 ಲಕ್ಷ ಮೌಲ್ಯದ ಕಬ್ಬಿನ ಬೆಳೆ ನಾಶ; ರೈತನ ಕಂಗಾಲು

ಹಾವೇರಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ನಾಲ್ಕು ಎಕರೆ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ನಡೆದಿದೆ.

ಧಾನಗೌಡ ಎಂಬುವವರಿಗೆ ಸಂಬಂಧಪಟ್ಟ ನಾಲ್ಕು ಎಕರೆ ತೋಟದಲ್ಲಿ ಬೆಳೆದ 5 ಲಕ್ಷ ಮೌಲ್ಯದ ಕಬ್ಬಿನ ಬೆಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಸುಟ್ಟು ಕರಕಲಾಗಿದೆ. ಅಲ್ಲದೇ ಈ ವೇಳೆ ಬೆಂಕಿಯ ಕೆನ್ನಾಲಿಗಗೆ ಹೊರಬಂದ ಹೆಜ್ಜೆನೂ ಹುಳುಗಳು ಜಮೀನಿಗೆ ಬಂದಿದ್ದ ಮಾಲೀಕ ದಾನಗೌಡ ಅವರ ಮಗ ಬಸವನಗೌಡ ಮತ್ತು ಪಕ್ಕದಲ್ಲಿ ಕೆರೆ ತುಂಬಿಸುವ ಯೋಜನೆ ಕಾಲುವೆ ತೋಡುತ್ತಿದ್ದ ಜೆಸಿಬಿ ಚಾಲಕ ಇವರಿಬ್ಬರ ಮೇಲೆ ಏಕಾಏಕಿ ದಾಳಿ ಮಾಡಿ ಮಾಡಿದೆ.

ಇದೀಗ ಗಂಭೀರವಾಗಿ ಗಾಯಗೊಂಡ ಬಸವನಗೌಡ, ಮತ್ತು ಜೆಸಿಬಿ ಡ್ರೈವರ್ ರವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯವೆ ಅಗ್ನಿ ಅವಘಡಕ್ಕೆ ಕಾರಣವೆಂದು ನೊಂದ ರೈತನು ಆರೋಪಿಸಿದ್ದಾರೆ.

ಈ ಘಟನೆಯು ಕಾಗಿನೆಲೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES
- Advertisment -
Google search engine

Most Popular

Recent Comments