Thursday, August 28, 2025
HomeUncategorizedದರ್ಶನ್​, ಯಶ್​ ವಿರುದ್ಧ ದೂರು..!

ದರ್ಶನ್​, ಯಶ್​ ವಿರುದ್ಧ ದೂರು..!

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ದರ್ಶನ್ ಮತ್ತು ಯಶ್ ಸುಮಲತಾ ಅವರ ಪರ ಪ್ರಚಾರಕ್ಕೆ ನಿಂತಿರೋದ್ರಿಂದ ಚುನಾವಣೆ ಮುಗಿಯವರೆಗೆ ಅವರಿಬ್ಬರ ಸಿನಿಮಾಗಳನ್ನು, ಜಾಹಿರಾತುಗಳನ್ನು ನಿಷೇಧಿಸಬೇಕು ಅಂತ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಜಯರಾಜ್ ಅವರು ಒತ್ತಾಯಿಸಿದ್ದಾರೆ.
‘ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಈ ಬಗ್ಗೆ ವಿವರಣೆ ನೀಡಲು ನಡೆಸಿದ ಪ್ರೆಸ್​ಮೀಟ್​ನಲ್ಲಿ ಜೊತೆಗಿದ್ದ ದರ್ಶನ್ ಮತ್ತು ಯಶ್​ ನಾವು ಸುಮಲತಾ ಅವರನ್ನು ಮಂಡ್ಯದಲ್ಲಿ ಗೆಲ್ಲಿಸಿಕೊಂಡು ಬರ್ತೀವಿ. ನಮ್ಮ ಅಭಿಮಾನಿಗಳಿಗೂ ಸುಮಲತಾ ಪರ ಪ್ರಚಾರ ಮಾಡುವಂತೆ ಹೇಳ್ತೀವಿ ಅಂತ ಬಹಿರಂಗವಾಗಿಯೇ ಹೇಳಿದ್ದಾರೆ.ಇದು ನೀತಿಸಂಹಿತೆ ಅಡಿಯಲ್ಲಿ ಬರುತ್ತೆ. ಹೀಗಾಗಿ ಚುನಾವಣೆ ಮುಗಿಯವರೆಗೆ ಅವರಿಬ್ಬರ ಚಿತ್ರಗಳನ್ನು, ಜಾಹಿರಾತುಗಳನ್ನು ನಿಷೇಧಿಸಬೇಕು’ ಅಂತ ದೂರು ಪ್ರತಿಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments