Thursday, August 28, 2025
HomeUncategorizedಸುಮಲತಾ ಪ್ರೆಸ್​ಮೀಟ್​ - ದರ್ಶನ್​, ಯಶ್ ಸಾಥ್..!

ಸುಮಲತಾ ಪ್ರೆಸ್​ಮೀಟ್​ – ದರ್ಶನ್​, ಯಶ್ ಸಾಥ್..!

ಬೆಂಗಳೂರು : ಮಂಡ್ಯ ‘ಲೋಕ’ಕಣದಲ್ಲಿ ಮೈತ್ರಿಗೆ ಸೆಡ್ಡು ಹೊಡೆದು ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರು ಇಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರೆಸ್​ಮೀಟ್ ನಡೆಸಿದರು. ಸುಮಲತಾ ಅವರ ಸುದ್ದಿಗೋಷ್ಠಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರೂ ಸಾಥ್ ನೀಡಿದ್ದಾರೆ.
ಹಿರಿಯ ನಟ ದೊಡ್ಡಣ್ಣ, ಪ್ರೊಡ್ಯೂಸರ್​ ರಾಕ್​ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಗಣ್ಯರು, ಸುಮಲತಾ ಅವರ ಪುತ್ರ, ನಟ ಅಭಿಷೇಕ್ ಅಂಬರೀಶ್ ಮತ್ತಿತರರು ಉಪಸ್ಥಿತರಿದ್ದರು.
ಮಾರ್ಚ್​ 20ರಂದು ನಾಮಪತ್ರ ಸಲ್ಲಿಕೆ ಮಾಡಿ, ಅದೇ ದಿನ ಬೃಹತ್ ಸಮಾವೇಶ ನಡೆಸಿ ತಮ್ಮ ಬಲ ಪ್ರದರ್ಶನ ಮಾಡಲಿದ್ದಾರೆ. ಸಮಾವೇಶಲ್ಲಿ ಚಿತ್ರರಂಗದ ಗಣ್ಯರ ಸಾಥ್ ಮಾತ್ರವಲ್ಲದೆ ರಾಜಕೀಯ ನಾಯಕರ ಭಾರೀ ಬೆಂಬಲ ಸಿಗುವ ನಿರೀಕ್ಷೆಯೂ ದಟ್ಟವಾಗಿದೆ.

ಮಾ.20ಕ್ಕೆ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ಶಕ್ತಿ ಪ್ರದರ್ಶನ..!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments