Sunday, September 28, 2025
HomeUncategorizedಮೋದಿ ಸಾಧನೆಯನ್ನು ಹೇಳಿ ವೋಟ್​​ ಕೇಳುತ್ತೇವೆ : ಸಚಿವ ಕಾರಜೋಳ

ಮೋದಿ ಸಾಧನೆಯನ್ನು ಹೇಳಿ ವೋಟ್​​ ಕೇಳುತ್ತೇವೆ : ಸಚಿವ ಕಾರಜೋಳ

ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಹೇಳಿ ಮತದಾರರ ಬಳಿ ವೋಟ್​​ ಕೇಳುತ್ತೇವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ವಿಧಾನ ಪರಿಷತ್ತು ಸದಸ್ಯ ಹಣಮಂತ ‌ನಿರಾಣಿ ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಅರುಣ್ ಶಹಾಪುರ ಆ್ಯಕ್ಟಿವ್ ಆಗಿದ್ದು, ‌ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ್ದಾರೆ ಎಂದರು.

ಅಷ್ಟೆಅಲ್ಲದೇ ಪ್ರಧಾನಿ ಮೋದಿ ಅವರ ಸಾಧನೆಯನ್ನು ಜನತೆಯ ಬಳಿ ಹೇಳುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನೇಕ ಅಭಿವೃದ್ಧಿ ಕೆಲಸ ಮಾಡಿದೆ. ಆದ್ದರಿಂದ ಪಕ್ಷದ ಸಾಧನೆಯನ್ನು ‌ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ ಎಂದು ಹೇಳಿದರು.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಬಣ ರಾಜಕೀಯ ‌ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಬಣ ರಾಜಕೀಯ ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಾಗುತ್ತದೆ. ಜಾರಕಿಹೊಳಿ ಸೇರಿ ಎರಡು ಜಿಲ್ಲೆಯ ಮುಖಂಡರು ಎಲ್ಲರೂ ಸಭೆಗೆ ಬರ್ತಾರೆ. ವಿಷಯಾಧಾರಿತ ಅಭಿಪ್ರಾಯ ಭಿನ್ನಾಭಿಪ್ರಾಯ ಸಹಜವಾದದ್ದು, ಬಿಜೆಪಿ ಎಲ್ಲಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments

ylichnie kashpo_daKn on
SamuelDoulk on
Michaeljet on
gorshok s avtopolivom_qqot on
tele_bmmr on
Mohammeddlix on
tele_hfmr on
gorshok s avtopolivom_mqMl on
GeorgeEvisy on
Michaelhop on
Michaelhop on
Michaelcib on
dizainerskie kashpo_uimr on
Rogerciz on
Rogerciz on
XRumer23jinly on