Monday, August 25, 2025
Google search engine
HomeUncategorizedನೀರು ಕೊಡು ಮಗ ಅಂದಿದ್ದಕ್ಕೆ ಬಿತ್ತು ಹೆಣ.!

ನೀರು ಕೊಡು ಮಗ ಅಂದಿದ್ದಕ್ಕೆ ಬಿತ್ತು ಹೆಣ.!

ಬೆಂಗಳೂರು: ಹೆಣ್ಣಿಗ್ ಹೆಣ್ಣೇ ಶತ್ರು ಅಂತ ಗಾದೆ ಮಾತು ಕೇಳಿರ್ತಿವಿ. ಆದರೆ, ಇಲ್ಲಿ ಒಬ್ಬ ಆಟೋ ಡ್ರೈವರ್ ಗೆ ಇನ್ನೊಬ್ಬ ಆಟೋ ಡ್ರೈವರೇ ಶತ್ರು ಆಗ್ಬಿಟ್ಟಿದ್ದಾನೆ. ಶತ್ರು ಆದ್ರೂ ಪರವಾಗಿಲ್ಲ ಆದ್ರೇ ಇವ್ನು ಪ್ರಾಣಘಾತುಕ ಆಗ್ಬಿಟ್ಟಿದ್ದಾನೆ.

ಹೌದು, ಕಣ್ರಿ ಬೆಂಗಳೂರು ಒಂಥರಾ ಮಾಯಾ ಪ್ರಪಂಚ, ಇಲ್ಲಿ ಎಲ್ಲಾ ನಮ್ಮೋರು ತರಾನೇ ಕಾಣ್ತಾರೆ. ಆದ್ರೇ, ನಮ್ಮೋರಲ್ಲ. ನೀವೇನಾದ್ರೂ ಇವ್ರು ನಮ್ಮೋರು ತರಾನೇ ಕಾಣ್ತಾವ್ರಲ್ಲ ಅಂತ ಏನಾದ್ರೂ ಹೆಲ್ಪ್ ಕೇಳಿದ್ರೆ ಅಷ್ಟೇ ನಿಮ್ ಕಥೆ ಇಲ್ಲಿ ಆಗಿದ್ದು ಕೂಡ ಅದೇ ತರ ಕಣ್ರೀ.

ಕೊಲೆ ಆರೋಪಿ ಅಜಯ್

ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಕ್ರಾಸ್ ನ ಬಳಿ ಸಿದ್ದಿಕ್ ಎಂಬ 25 ವರ್ಷದ ಆಟೋ ಡ್ರೈವರ್ ಗಾಡಿ ಓಡ್ಸಿ ಸ್ವಲ್ಪ ಸುಸ್ತಾಗಿದ್ರಿಂದ ರಾತ್ರಿ ಸರಿ ಸುಮಾರು 11.30 ಕ್ಕೆ ಟೀ ಕುಡಿಯೋಣ ಅಂತ ಟೀ ಶಾಪ್ ಹತ್ರ ಆಟೋ ಹಾಕಿದ್ದಾನೆ. ಆಟೋ ಇಳ್ದು ಅಲ್ಲೇ ಇದ್ದ ಇನ್ನೊಬ್ಬ ಅಜಯ್ ಅನ್ನೋ ಆಟೋ ಡ್ರೈವರ್ ನೋಡಿದ್ದಾನೆ. ನಮ್ಮ ಆಟೋ ಡ್ರೈವರ್ರೇ ಅಲ್ವ ಅಂತ ಸಿದ್ದಿಕ್ ಮಗಾ ಸ್ವಲ್ಪ ನೀರು ಕೊಡೋ ಅಂತ ಅಜಯ್‌ಗೆ ಕೇಳಿದ್ದಾನೆ. ಅಷ್ಟೇ ಅಜಯ್ ಕೋಪಗೊಂಡು ನನ್ನೇ ಮಗಾ ನೀರು ಕೊಡೊ ಅಂತಿಯಾ ಅಂತ ಬೈದಿದ್ದಾನೆ. ಇದ್ಕೇ ಸಿದ್ದಿಕ್ ಅಲ್ಲಾ ಗುರು ಜಸ್ಟ್ ನೀರು ತಾನೇ ಕೇಳಿದ್ದು ಅಂತ ಅಜಯ್ ಮಾತಿಗೆ ಎದುರು ಮಾತು ಕೊಟ್ಟಿದ್ದಾನೆ.

ಇವ್ರಿಬ್ರಿಗೂ ಮಾತಿನ ಚಕಮಕಿ ಆಗುತ್ತೆ. ಇದ್ಕಿದಂಗೆ ಜೋರಾಗಿ ತಾರಕಕ್ಕೇರಿ ಅಜಯ್ ತನ್ನ ಆಟೋದಲ್ಲಿದ್ದ ಚಾಕು ತಂದು ಸಿದ್ದಿಕ್ ಎದೆಗೆ ಚುಚ್ಬಿಟ್ಟಿದ್ದಾನೆ. ತಕ್ಷಣ ರಕ್ತಸ್ತ್ರಾವ ಆಗಿ ಒದ್ದಾಡ್ತಿದ್ದ ಸಿದ್ದಿಕ್ ನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೇ ಸಿದ್ದಿಕ್ ಗೆ ಗಂಭೀರ ಗಾಯ ಆಗಿದ್ದ ಕಾರಣ ಚಿಕಿತ್ಸೆ ಫಲಕಾರಿ ಆಗ್ದೇ ಸಿದ್ದಿಕ್ ಕೊನೆಯುಸಿರೆಳಿದ್ದಾನೆ.

‌ಸದ್ಯಕ್ಕೆ ಸಿದ್ದಿಕ್ ನನ್ನ ಕೊಲೆಗೈದ ಅಜಯ್ ಕಾಣೆಯಾಗಿದ್ದು. ಇದೀಗ ಪೀಣ್ಯ ಪೊಲೀಸ್ರು ಆರೋಪಿ ಅಜಯ್ ನನ್ನು ಹುಡುಕಾಡ್ತಿದ್ದಾರೆ.

ಅಶ್ವಥ್ ಎಸ್. ಎನ್, ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments