Friday, August 22, 2025
Google search engine
HomeUncategorizedಮುಂಗಾರು ಮಳೆಗೆ ಮಂಗಳೂರು ತತ್ತರ; ವಿಪತ್ತು ನಿರ್ವಹಣೆ NDRF ತಂಡಗಳಿಂದ ಸಿದ್ದತೆ

ಮುಂಗಾರು ಮಳೆಗೆ ಮಂಗಳೂರು ತತ್ತರ; ವಿಪತ್ತು ನಿರ್ವಹಣೆ NDRF ತಂಡಗಳಿಂದ ಸಿದ್ದತೆ

ಮಂಗಳೂರು : ಮಾನ್ಸೂನ್​ ಕೇರಳಕ್ಕೆ ಕಾಲಿಟ್ಟಿದ್ದೆ ತಡ ರಾಜ್ಯದ ಹಲವಡೆ ಭಾರಿ ಮಳೆಯಾಗುತ್ತಿದ್ದು. ಕರಾವಳಿ ಜಿಲ್ಲೆ ಮಂಗಳೂರಿನಲ್ಲೂ ನಿರಂತರ ಮಳೆಯಾಗುತ್ತಿದೆ. ಭಾರಿ ಮಳೆಗೆ ಕಲ್ಲಡ್ಕ​ ಫ್ಲೈಓವರ್​ ಜಲಪಾತವಾಗಿ ಬದಲಾಗಿದ್ದು. ವಿಪತ್ತು ನಿರ್ವಹಣೆಗೆ ಎಸ್​ಡಿಆರ್​ಎಪ್​ ಮತ್ತು ಎನ್​ಡಿಆರ್​ಎಫ್​ ತಂಡಗಳು ಮಂಗಳೂರಿಗೆ ಆಗಮಿಸಿವೆ.

ಮಂಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ನಡುವೆ ಎಂದಿನಂತೆ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ನ ಅಡಿಭಾಗದಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಯಲ್ಲೇ ಹರಿದಿದೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಫ್ಲೈ ಓವರ್ ಮೇಲೆ ನೀರು ಸಂಗ್ರಹವಾಗಿದ್ದು. ಫ್ಲೈ ಓವರ್ ಮೇಲಿಂದ ನೀರು ಜಲಪಾತದಂತೆ ಧುಮ್ಮುಕ್ಕುತ್ತಿದೆ.

ಇದನ್ನೂ ಓದಿ :ಬ್ಲಿಂಕ್ ತಂಡದಿಂದ ವಿನೂತನ ಪ್ರಯೋಗ; ಹಾರರ್ ಫಿಲಂ ಟೀಸರ್ ಬಿಡುಗಡೆ

ಗಾಳಿಯ ಸಹಿತ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ ಮಂಗಳೂರಿನ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು. ನಿರಂತರ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ವಿಪತ್ತು ನಿರ್ವಹಣೆಗೆ ಎಂದು ಮಂಗಳೂರಿಗೆ ಎಸ್​ಡಿಆರ್​ಎಫ್​(SDRF) ಮತ್ತು ಪುತ್ತೂರಿಗೆ ಎಸ್​ಡಿಆರ್​ಎಫ್​ (NDRF) ತಂಡಗಳನ್ನು ರವಾನಿಸಿದ್ದು. ಯಾವುದೇ ಸನ್ನಿವೇಶ ಎದುರಾದರು ಸಮರ್ಥವಾಗಿ ನಿರ್ವಹಣೆ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments