Friday, August 22, 2025
Google search engine
HomeUncategorizedಹಿಂದುಗಳು ತಾಯ್ನಾಡಿನಲ್ಲಿ ಬದುಕಲು, ಕಾಂಗ್ರೆಸ್​ ಸಾಯಬೇಕು: ಬಿಜೆಪಿ ನಾಯಕ ಅಮಿತ್ ಮಾಳವೀಯ

ಹಿಂದುಗಳು ತಾಯ್ನಾಡಿನಲ್ಲಿ ಬದುಕಲು, ಕಾಂಗ್ರೆಸ್​ ಸಾಯಬೇಕು: ಬಿಜೆಪಿ ನಾಯಕ ಅಮಿತ್ ಮಾಳವೀಯ

ದೆಹಲಿ: ರಾಮನಗರ ಜಿಲ್ಲೆ ಹೆಸರು‌ ಬದಲಾವಣೆ ವಿಚಾರವಾಗಿ ಬಿಜೆಪಿಯ ಐಟಿ ಸೆಲ್​ ಮುಖ್ಯಸ್ಥ ಅಮಿತ್​ ಮಾಳವೀಯ ಟ್ವಿಟ್​ ಮಾಡಿ ಆಕ್ರೋಶ ಹೊರಹಾಕಿದ್ದು. ಹಿಂದೂಗಳು ತಮ್ಮ ತಾಯಿ ನಾಡಿನಲ್ಲಿ ಜೀವಿಸಬೇಕು ಅಂದರೆ ಕಾಂಗ್ರೆಸ್​ ಸಾಯಬೇಕು ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಜಟಾಪಟಿಯಲ್ಲಿ ಕೊನೆಗೂ ರಾಮನಗರಕ್ಕೆ ಮರು ನಾಮಕರಣವಾಗಿದೆ. ಇನ್ಮುಂದೆ ರಾಮನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ. ಈ ನಿರ್ಧಾರಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿದ್ದು. ಡಿಕೆ ಶಿವಕುಮಾರ್​ ರಿಯಲ್ ಎಸ್ಟೇಟ್ ಬಿಸಿನೆಸ್​ ಮಾಡಲು ರಾಮನಗರದ ಹೆಸರು ಬದಲಾಯಿಸಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ:ಆನೆಗಳು ಕಣ್ಣೀರಿಟ್ಟುಕೊಂಡು ಹೋಗಿವೆ, ಅವುಗಳನ್ನ ವಾಪಾಸ್​ ಕರೆಸಿಕೊಳ್ಳಬೇಕು: ವಾಟಾಳ್​ ನಾಗರಾಜ್​

ಆದರೆ ಇದರ ಮಧ್ಯೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್​ ಮಾಳವೀಯ ರಾಮನಗರ ಹೆಸರು ಬದಲಾವಣೆಗೆ ಹಿಂದುತ್ವದ ಲಿಂಕ್​ ಕೊಟ್ಟಿದ್ದು. “ಭಗವಾನ್ ರಾಮನ ಹೆಸರನ್ನ ಕೈ ಬಿಟ್ಟು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸಿದ್ದಾರೆ. ಇದರಿಂದಾಗಿ ಹಿಂದೂಗಳ ಅಸ್ತಿತ್ವಕ್ಕೆ ಅಪಾಯ ಇದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ :ಹಾವು ಕಚ್ಚಿದರು, ವಿಚಲಿತನಾಗದೆ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ: ವೈದ್ಯರು ಶಾಕ್​

ಹಿಂದೂಗಳು ಮತ್ತು ಅವರ ನಂಬಿಕೆಗಳ ಬಗ್ಗೆ ಕಾಂಗ್ರೆಸ್‌ನ ತೀವ್ರ ದ್ವೇಷವು ನಮ್ಮ ನಾಗರಿಕತೆಯ ಅಸ್ತಿತ್ವಕ್ಕೆ ಅಪಾಯವ ಉಂಟು ಮಾಡುತ್ತದೆ. ಹಿಂದೂಗಳು ತಮ್ಮ ಏಕೈಕ ತಾಯ್ನಾಡಿನಲ್ಲಿ ಉಳಿಯಬೇಕಾದರೆ ಕಾಂಗ್ರೆಸ್ ಸಾಯಬೇಕು. ಈ ಆಯ್ಕೆ ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಬರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments