Sunday, September 14, 2025
HomeUncategorizedಆರೋಪಿಯಿಂದ ಸೊಂಕೀಗೊಳಗಾದ ಖಾಕಿಗಳು ಡಿಸ್ಚಾರ್ಜ್

ಆರೋಪಿಯಿಂದ ಸೊಂಕೀಗೊಳಗಾದ ಖಾಕಿಗಳು ಡಿಸ್ಚಾರ್ಜ್

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೋಲಿಸ್ ಠಾಣೆಯಲ್ಲಿ ಇಬ್ಬರಿಗೆ ಕೊರೊನಾ ಸೊಂಕು ತಗುಲಿತ್ತು. ಕಳೆದ ತಿಂಗಳು 23 ರಂದು ರಾಬರಿ ಪ್ರಕರಣದಲ್ಲಿ ಆರೋಪಿಯನ್ನು ಬಂಧಸಿಲಾಗಿತ್ತು.  ಬಂಧನದ ನಂತರ ಆರೋಪಿಗೆ ಕೊರೊನಾ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಆರೋಪಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಯನ್ನು ಬೆಂಗಳೂರಿನ ಕೋವಿಡ್ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಗಿತ್ತು. ಆರೋಪಿಗೆ ಕೊರೊನಾ ಪಾಸಿಟಿವ್ ಆಗಿದ್ದ ಹಿನ್ನೆಲೆ ಬಂಧನ ಮಾಡಲು ಹೋಗಿದ್ದ ಇಬ್ಬರು ಪೋಲಿಸ್ ಸಿಬ್ಬಂದಿ ಗೆ ಕೊರೊನಾ ಸೊಂಕು ಹರಡಿತ್ತು. ಇದೀಗ 10 ದಿನಗಳ ಚಿಕಿತ್ಸೆ ನಂತರ  ಇಬ್ಬರು ಪೋಲಿಸ್ ಸಿಬ್ಬಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.‌ ಕೋವಿಡ್ 19 ಗೆ ಒಳಗಾಗಿದ್ದ ಇಬ್ಬರು ಪೋಲಿಸ್ ಸಿಬ್ಬಂದಿ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ 10 ದಿನಗಳ ಕಾಲ ಚಿಕಿತ್ಸೆ ಪಡೆದು ಇದೀಗ ಆರೋಗ್ಯವಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ ನಿಂದ ಹೊರಬಂದ ಪೋಲಿಸ್ ಸಿಬ್ಬಂದಿ ಗೆ ಸಹೋದ್ಯೋಗಿ ಹೂಮಾಲೆ ಹಾಕಿ ಶುಭ ಕೋರಿದ್ದಾರೆ. ಇಬ್ಬರು ಪೋಲಿಸ್ ಸಿಬ್ಬಂದಿ ಗೆ ಕೊರೊನಾ ಪಾಸಿಟಿವ್ ಬಂದಿದ್ದ ಕಾರಣ ಪೋಲಿಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಠಾಣೆಯನ್ನು ಸ್ವಚ್ಚಗೊಳಿಸಿ ಕಾರ್ಯ ನಿರ್ವಹಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments