Monday, August 25, 2025
Google search engine
HomeUncategorizedಆಸ್ತಿ ವಿವಾದ : ಡೆತ್​ ನೋಟ್​ ಬರೆದು ಪ್ರೌಢಶಾಲೆ ಮುಖ್ಯ ಶಿಕ್ಷಕ ಆತ್ಮಹತ್ಯೆ !

ಆಸ್ತಿ ವಿವಾದ : ಡೆತ್​ ನೋಟ್​ ಬರೆದು ಪ್ರೌಢಶಾಲೆ ಮುಖ್ಯ ಶಿಕ್ಷಕ ಆತ್ಮಹತ್ಯೆ !

ಬೆಂಗಳೂರು : ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಮೃತ ಶಿಕ್ಷಕನನ್ನು ನರಸಿಂಹ ಮೂರ್ತಿ ಎಂದು ಗುರುತಿಸಲಾಗಿದೆ.

ಹೊಸಕೋಟೆ ಜಡಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ 59 ವರ್ಷದ ನರಸಿಂಹ ಮೂರ್ತಿ ಜನವರಿ 15ಕ್ಕೆ ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಆದರೆ ಬೆಂಗಳೂರಿನ ತುಂಗಾನಗರದಲ್ಲಿ 25 ಗುಂಟೆ ಜಮೀನು ಹೊಂದಿದ್ದ ನರಸಿಂಹಮೂರ್ತಿ ಕಾಂಗ್ರೆಸ್​ ಮುಖಂಡ ಸತೀಶ್​ ಎಂಬುವವನಿಗೆ ಮಾರಾಟ ಮಾಡಲು ಮುಂದಾಗಿದ್ದರು.

ಇದನ್ನೂ ಓದಿ:ಅತ್ತೆ ಬೇಗ ಸಾಯಲಿ ಎಂದು ನೋಟ್​ ಮೇಲೆ ಬರೆದು ಹುಂಡಿಗೆ ಹಾಕಿದ ಸೊಸೆ !

ಕಾಂಗ್ರೆಸ್​ ಮುಖಂಡ ಸತೀಶ್ ಕೂಡ 10 ಲಕ್ಷ ಹಣ ನೀಡಿ ಅಗ್ರಿಮೆಂಟ್​ ಹಾಕಿಸಿಕೊಂಡಿದ್ದರು. ಆದರೆ ಉಳಿದ ಹಣ ನೀಡದೆ ಸತೀಶ್​ ಜಾಗವನ್ನು ಲಪಟಾಯಿಸಿಕೊಂಡಿದ್ದು, ಹಣ ಕೇಳಲು ಹೋದಾಗ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇವೆಲ್ಲದರಿಂದ ಮನನೊಂದದ್ದ ಶಿಕ್ಷಕ ನರಸಿಂಹ ಮೂರ್ತಿ ಡೆತ್​ ನೋಟ್​ ಬರೆದಿಟ್ಟು. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments