Tuesday, August 26, 2025
Google search engine
HomeUncategorizedಇಂದು ಯುವಕರಿಗೆ ಉದ್ಯೋಗ ಸಿಗಲು ಕಾರಣ ಎಸ್​.ಎಂ ಕೃಷ್ಣರ ಯೋಜನೆಗಳು : ಪರಮೇಶ್ವರ್​

ಇಂದು ಯುವಕರಿಗೆ ಉದ್ಯೋಗ ಸಿಗಲು ಕಾರಣ ಎಸ್​.ಎಂ ಕೃಷ್ಣರ ಯೋಜನೆಗಳು : ಪರಮೇಶ್ವರ್​

ಬೆಳಗಾವಿ : ರಾಜ್ಯ ಕಂಡ ಅಪ್ರತಿಮ ರಾಜಕಾರಣಿ ಎಸ್​ಎಂ ಕೃಷ್ಣ ನಿಧನರಾಗಿದ್ದು. ಇವರ ನಿಧನಕ್ಕೆ ಸಂತಾಪ ಸೂಚಿಸಿದ ಗೃಹ ಸಚಿವ ಪರಮೇಶ್ವರ್​ ‘ ಬೆಂಗಳೂರನ್ನು ಐಟಿ ಸಿಟಿಯಾಗಿ ರೂಪಿಸಿದ ಹೆಮ್ಮ ಕೇವಲ ಎಸ್​ಎಂ ಕೃಷ್ಣರಿಗೆ ಸಲ್ಲುತ್ತದೆ. ಇಂದು ಯುವಕರು ಉದ್ಯೋಗ ಪಡೆಯುತ್ತಿದ್ದಾರೆ ಎಂದರೆ ಅದು ಅವರ ಕೊಡುಗೆಯಾಗಿದೆ ಎಂದು ಹೇಳಿದರು.

ಎಸ್.ಎಂ.ಕೃಷ್ಣರವರ ನಿಧನಕ್ಕೆ ಸಚಿವ ಡಾ ಜಿ ಪರಮೇಶ್ವರ ಸಂತಾಪ ಸೂಚಿಸಿದ್ದು. ‘ಎಸ್​.ಎಂ ಕೃಷ್ಣರವರು  ರಾಜ್ಯದಲ್ಲಿ ಐ.ಟಿ ರೆವ್ಯುಲ್ಯೂಷನ್ ಮಾಡಿದರು, ಯುವಕರಿಗೆ ಉದ್ಯೋಗ ಸಿಗಲು ಎಸ್ ಎಂ ಕೃಷ್ಣ ಕಾರಣರಾಗಿದ್ದರು. ಅನೇಕ ರಹಸ್ಯ ವಿಚಾರಗಳಲ್ಲಿ ನನಗೆ ಜವಾಬ್ದಾರಿ ನೀಡಿದ್ದರು. ವೀರಪ್ಪನ್​ ವಿಚಾರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ನನ್ನ ಬಳಿಯಲ್ಲಿ ಚರ್ಚೆ ನಡೆಸಿದ್ದರು ಎಂದು ಹೇಳಿದರು.

ಇಂದು ರಾಜಕೀಯ ಪರಿಸ್ಥಿತಿ ಬದಲಾಗಿದೆ ಆದರೆ ಎಸ್​ಎಂ ಕೃಷ್ಣ ಎಂದು ಕೂಡ ಕೆಟ್ಟ ಪದ  ಬಳಸಿದ್ದು ನಾಯನು ನೋಡಿಯೇ ಇಲ್ಲ.  ಇವರ ಸಾವು ವೈಕಕ್ತಿಕವಾಗಿ ನನಗೆ ನೋವುಂಡು ಮಾಡಿದೆ ಎಂದು ಹೇಳಿದರು.

ಎಸ್​ಎಂ ಕೃಷ್ಣರವರ ಅಂತ್ಯಕ್ರಿಯೆ ಬಗ್ಗೆ ಮಾತನಾಡಿದ ಸ ಪರಮೇಶ್ವರ್​ ‘ಅವರ ಅಂತ್ಯ ಸಂಸ್ಕಾರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಅವರಿಗೆ ನಾವು ಎಂತಹ ಗೌರವ ನೀಡಿದರು ಕೂಡ ಅದು ಕಡಿಮೆಯೆ ಆಗುತ್ತದೆ. ರಾಜ್ಯದಲ್ಲಿ ಶೋಕಾಚರಣೆ ಆಚರಿಸುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments