Saturday, August 23, 2025
Google search engine
HomeUncategorizedGood News : ಕರೆಂಟ್ ​ಬಿಲ್​​ ಬಾಕಿ ಇದ್ರೂ ಸಿಗಲಿದೆ 'ಗೃಹಜ್ಯೋತಿ'

Good News : ಕರೆಂಟ್ ​ಬಿಲ್​​ ಬಾಕಿ ಇದ್ರೂ ಸಿಗಲಿದೆ ‘ಗೃಹಜ್ಯೋತಿ’

ಬೆಂಗಳೂರು : ಗೃಹಜ್ಯೋತಿ ಯೋಜನೆಗೆ ಈಗಾಗಲೇ 95 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ನಡುವೆ ರಾಜ್ಯದ ಜನರಿಗೆ ಇಂಧನ ಇಲಾಖೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ.

ಗೃಹಜ್ಯೋತಿ ಯೋಜನೆ ಜುಲೈ 1ರಿಂದಲೇ ಜಾರಿಯಾಗಿದೆ. ಆದರೆ, ವಿದ್ಯುತ್​ ಬಿಲ್​​ ಬಾಕಿ ಉಳಿಸಿಕೊಂಡಿರುವವರು ನಮಗೆ ಈ ಯೋಜನೆಯ ಲಾಭ ಸಿಗುತ್ತಾ? ಇಲ್ವಾ? ಅನ್ನೋ ಗೊಂದಲದಲ್ಲಿದ್ದರು. ಇದೀಗ ಬೆಸ್ಕಾಂ ಎಲ್ಲ ಗೊಂದಲಕ್ಕೂ ತೆರೆ ಎಳೆದಿದೆ.

ಸೆಪ್ಟೆಂಬರ್​ 30ರೊಳಗೆ ಕರೆಂಟ್ ಬಿಲ್ ಬಾಕಿ ಪಾವತಿಸಲು ಅವಕಾಶ ಕಲ್ಪಿಸಿದೆ. ಜುಲೈ 25ರೊಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಆಗಸ್ಟ್​​ ಬಿಲ್​ನಲ್ಲಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಇದನ್ನೂ ಓದಿ : ಗೃಹಜ್ಯೋತಿ ಯೋಜನೆ ಯಾರಿಗೆಲ್ಲಾ ಸಿಗಲಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!

200 ಯುನಿಟ್ ಮೀರಬಾರದು

ಜುಲೈನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಸೆಪ್ಟೆಂಬರ್ ಬಿಲ್​ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ. ಯೋಜನೆಗೆ ಅರ್ಹರಾಗಲು ಸರಾಸರಿ 200 ಯುನಿಟ್ ಮೀರಬಾರದು ಎಂದು ಬೆಸ್ಕಾಂ ಎಂ.ಡಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಒಟ್ನಲ್ಲಿ, ಗೃಹಜ್ಯೋತಿ ಯೋಜನೆಗೆ ಎಲ್ಲೆಡೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ರಾಜ್ಯದ ಜನತೆ ಜುಲೈ ತಿಂಗಳಲ್ಲೇ ಯೋಜನೆಯ ಲಾಭ ಪಡೆಯಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments