Sunday, August 24, 2025
Google search engine
HomeUncategorizedಇದು ರೋಡ್ ಶೋ ಅಲ್ಲ.. ಗೋಪಾಲಯ್ಯನವರ ವಿಜಯೋತ್ಸವ : ಅಣ್ಣಾಮಲೈ

ಇದು ರೋಡ್ ಶೋ ಅಲ್ಲ.. ಗೋಪಾಲಯ್ಯನವರ ವಿಜಯೋತ್ಸವ : ಅಣ್ಣಾಮಲೈ

ಬೆಂಗಳೂರು : ಈ ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ನೋಡಿದರೆ ಇದು ರೋಡ್ ಶೋ ಅಲ್ಲ. ಗೋಪಾಲಯ್ಯ ಅವರ ವಿಜಯೋತ್ಸವದಂತೆ ಕಾಣುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಕೆ.ಅಣ್ಣಾಮಲೈ ಅವರು ತಿಳಿಸಿದರು.

ರೋಡ್ ಶೋನಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಕ್ಷೇತ್ರದ ಜನತೆ ಬಿಜೆಪಿಗೆ ಹಾಗೂ ಗೋಪಾಲಯ್ಯನವರಿಗೆ ಹೆಚ್ಚಿನ ಮತ ನೀಡಿ ಅವರನ್ನು ವಿಜಯಶಾಲಿಯನ್ನಾಗಿ ಮಾಡಬೇಕು ಎಂದರು.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಈ ರೋಡ್ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಆಗಮಿಸಿ ಎರಡು ಗಂಟೆಗಳ ಕಾಲ ನಮ್ಮ ಜೊತೆಗೆ ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ. ನಿಮ್ಮ ಹೆಚ್ಚಿನ ಬೆಂಬಲವನ್ನು ನೀಡುತ್ತಿರುವುದು ಬಹಳ ಸಂತಸವಾಗಿದೆ ಎಂದು ಕೆ.ಅಣ್ಣಾಮಲೈ ಹೇಳಿದರು.

ಇದನ್ನೂ ಓದಿ : ಮಂಡ್ಯದಲ್ಲಿ ಈ ಬಾರಿ ‘ಕಮಲ ಅರಳಲಿದೆ’ : ಸಿಎಂ ಬೊಮ್ಮಾಯಿ

ರೋಡ್ ಶೋ ಕಾರ್ಯಕ್ರಮವು ಡಾ.ರಾಜಕುಮಾರ್ ಪ್ರತಿಮೆ ಬಳಿಯಿಂದ ಜೆಸಿ ನಗರ,  ಕುರುಬರಹಳ್ಳಿ ಸರ್ಕಲ್ ಮಾರ್ಗವಾಗಿ ಸತ್ಯನಾರಾಯಣ ಚೌಲ್ಟ್ರಿ ಸರ್ಕಲ್ ವರೆಗೆ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಉಪಮೇಯ ಎಸ್. ಹರೀಶ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶಿವಾನಂದಮೂರ್ತಿ ನಾಗರಾಜ್, ಜಯರಾಮ್, ಶ್ರೀನಿವಾಸ್, ಮಹದೇವು, ಡಾ. ಗಿರೀಶ್ ನಾಶಿ ಸೇರಿದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments