ಮೈಸೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವರ್ಷಗಳ ನಂತರ ಐಪಿಎಲ್ ಫೈನಲ್ ತಲುಪಿದೆ. ನಾಳೆ ಗುಜರಾತ್ ಅಹಮ್ಮದಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಮತ್ತು ಆರ್ಸಿಬಿ ತಂಡಗಳು ಸೆಣಸಾಡಲಿದ್ದು. ಎರಡು ತಂಡಗಳು ಕಪ್ ಗೆಲ್ಲುವ ಉತ್ಸಾಹದಲ್ಲಿವೆ. ಇದರ ನಡುವೆ ಆರ್ಸಿಬಿ ಕಪ್ ಗೆಲ್ಲಲಿ ಎಂದು ರಾಜ್ಯದೆಲ್ಲಡೆ ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದು. ಬಾಲಕಿಯೊಬ್ಬಳು ಅಂಜನಾದ್ರಿ ಬೆಟ್ಟದಲ್ಲಿ ಹರಕೆ ತೀರಿಸಿ ಆರ್ಸಿಬಿ ಕಪ್ ಗೆಲ್ಲಲಿ ಎಂದು ಪ್ರಾರ್ಥಿಸಿದ್ದಾಳೆ. ಇದನ್ನೂ ಓದಿ :ರಾಮನಗರಕ್ಕೆ ನೀರು ಬೇಕಿಲ್ಲ, ಕುಣಿಗಲ್ಗೆ ಅನ್ಯಾಯ ಆಗಿದೆ, ಅದನ್ನ ಸರಿಪಡಿಸಬೇಕು ; ಡಿ.ಕೆ ಶಿವಕುಮಾರ್
ಮೈಸೂರಿನಲ್ಲಿ ಶಾಸಕರಿಂದ ವಿಜಯ ದುರ್ಗಾ ಹೋಮ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫಿನಾಲೆಯಲ್ಲಿ ಪಂಜಾಬ್ ತಂಡವನ್ನು ಮಣಿಸಿ ಕಪ್ ಗೆಲ್ಲಲಿ ಎಂದು ಆರ್ಸಿಬಿ ಅಭಿಮಾನಿಗಳು ಪೂಜೆ-ಪುನಸ್ಕಾರದಲ್ಲಿ ತೊಡಗಿದ್ದಾರೆ. ಇದರ ನಡುವೆ ಶಾಸಕ ಹರೀಶ್ ಗೌಡ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಮೃತೇಶ್ವರ ದೇವಾಸ್ಥಾನದಲ್ಲಿ ವಿಜಯ ದುರ್ಗಾ ಹೋಮ ಮಾಡಿಸಿದ್ದಾರೆ. ಇದನ್ನೂ ಓದಿ :ಧೂಮಪಾನಕ್ಕೆ ಪ್ರತ್ಯೇಕ ಸ್ಥಳವಿಲ್ಲದ ಆರೋಪ; ವಿರಾಟ್ ಮಾಲಿಕತ್ವದ ಪಬ್ ವಿರುದ್ದ ಕೇಸ್ ದಾಖಲು
ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಆರ್ಸಿಬಿ ಕಪ್ ಗೆಲ್ಲಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದು. ಪಂಜಾಬ್ ವಿರುದ್ಧ ಆರ್ಸಿಬಿ ಗೆಲ್ಲಬೇಕು, ಪ್ರತಿಬಾರಿ ಕೂಡ ಕಪ್ ನಮ್ಮದೇ ಅಂತಿದ್ವೀ, ಆದರೆ ಈ ಬಾರಿ ಕಪ್ ನಮ್ಮದೇ. ಅದಕ್ಕಾಗಿ ವಿಜಯ ದುರ್ಗಾ ಹೋಮ ಮಾಡಿಸಿದ್ದೇವೆ. ಈ ಭಾರಿ ಅನುಮಾನ ಬೇಡ, ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿ ಹರಕೆ ತೀರಿಸಿದ ಪುಟ್ಟ ಬಾಲಕಿ..!
ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಪುಟ್ಟ ಬಾಲಕಿಯೊಬ್ಬಳು ಆರ್ಸಿಬಿ ಗೆಲುವಿಗಾಗಿ ಹರಕೆ ತೀರಿಸಿದ್ದು.ರಾಯಚೂರು ತಾಲ್ಲೂಕಿನ ದಿನ್ನಿ ಗ್ರಾಮದ ಬಾಲಕಿ ಕೆ.ಸಮೃದ್ಧಿ ತನ್ನ ಕುಟುಂಬದ ಜೊತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾಳೆ. ದೇವರಿಗೆ ಹೂ-ಹಣ್ಣು ಅರ್ಪಿಸಿ, ಆರ್ಸಿಬಿ ಬಾವುಟ ಹಿಡಿದು ಪ್ರದಕ್ಷಿಣೆ ಹಾಕಿ ಹರಕೆ ತೀರಿಸಿದ್ದು. ಈ ಸಲ ಕಪ್ ನಮ್ದೇ ಎಂದು ಬಾಲಕಿ ಹರ್ಷ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ :ಹಿಂದೂ ಮುಖಂಡರಿಗೆ ಜೈಷ್ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ; ತಲೆ ಕಡಿಯುವುದಾಗಿ ಬೆದರಿಕೆ
ಡಿಸಿಎಂ ಡಿಕೆ ಶಿವಕುಮಾರ್ ಕೂಡ ಆರ್ಸಿಬಿ ಗೆಲುವಿಗಾಗಿ ವಿಶ್ ಮಾಡಿದ್ದು. ನಮಗೆ ವಿಶ್ವಾಸ ಇದೆ, ಬೆಂಗಳೂರು ಈ ಭಾರಿ ಕಪ್ ಗೆಲ್ಲುತೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು. https://whatsapp.com/channel/0029Va5cjRY9Gv7Tls4bhb1n