ದೆಹಲಿ: ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧದಲ್ಲೇ ಕಡಿತಗೊಳಿಸಿರುವ ಪ್ರಧಾನಿ ಮೋದಿ ಭಾರತಕ್ಕೆ ವಾಪಾಸಾಗಿದ್ದು. ಇಂದು ಮುಂಜಾನೆ ದೆಹಲಿಯ ಪಾಲಂ ಏರ್ಬೇಸ್ಗೆ ಬಂದಿಳಿದ್ದಿದ್ದಾರೆ. ಏರ್ಪೋರ್ಟ್ಗೆ ಬಂದಿಳಿದ ತಕ್ಷಣವೇ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ದೆಹಲಿಯ ಪಾಲಂ ಏರ್ಬೇಸ್ಗೆ ಬಂದಿಳಿದ ಮೋದಿ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಇತರ ಅಧಿಕಾರಿಗಳೊಂದಿಗೆ ಸಂಕ್ಷಿಪ್ತ ಸಭೆ ನಡೆಸಿದರು.
ಇದನ್ನೂ ಓದಿ :ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ 2 ತಂಡ ರಚಿಸಿದ ಕರ್ನಾಟಕ ಸರ್ಕಾರ
ಆಪರೇಷನ್ ಟಿಕ್ಕಾ..!
ಉಗ್ರರ ವಿರುದ್ದ ಭಾರತ ಇದೀಗ ಕಾರ್ಯಚರಣೆಗೆ ಇಳಿದಿದ್ದು. ‘ಆಪರೇಷನ್ ಟಿಕ್ಕಾ’ ಹೆಸರಿನಲ್ಲಿ ಉಗ್ರರ ವಿರುದ್ದ ಕಾರ್ಯಚರಣೆ ಆರಂಭವಾಗಿದೆ. ಉಗ್ರರ ಹೆಡೆಮುರಿ ಕಟ್ಟಲು ಭಾರತೀಯ ಸೇನೆ ಸಿದ್ದವಾಗಿದ್ದು. ಒಳನುಸುಳಲು ಯತ್ನಿಸಿದ ಉಗ್ರರಿಬ್ಬರನ್ನು ಹೊಡೆದುರಿಳಿಸಲಾಗಿದೆ. ಈ ಕುರಿತು ಭದ್ರತ ಪಡೆ ಮಾಹಿತಿ ನೀಡಿದ್ದು. ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.