Friday, August 22, 2025
Google search engine
HomeUncategorizedಗೆಳತಿ ಮೇಲಿನ ಸಿಟ್ಟಿಗೆ ಕೈಕೊಯ್ದುಕೊಂಡ ಯುವಕ : ಪೊಲೀಸರ ಸಮಯ ಪ್ರಜ್ಞೆಗೆ ಬದುಕಿತು ಬಡಜೀವ !

ಗೆಳತಿ ಮೇಲಿನ ಸಿಟ್ಟಿಗೆ ಕೈಕೊಯ್ದುಕೊಂಡ ಯುವಕ : ಪೊಲೀಸರ ಸಮಯ ಪ್ರಜ್ಞೆಗೆ ಬದುಕಿತು ಬಡಜೀವ !

ಬೆಂಗಳೂರು : ಗೆಳತಿ ಮೇಲಿನ ಸಿಟ್ಟಿಗೆ ಯುವಕ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಪೊಲೀಸರ ಸಮಯ ಪ್ರಜ್ಞೆಯಿಂದ ಯುವಕನ ಪ್ರಾಣ ಉಳಿದಿದೆ.

ಕೇರಳ ಮೂಲದ ಯುವಕ ಜಿತಿನ್ (26) ಎಂಬಾತ ಬೆಂಗಳೂರಿನಲ್ಲಿ ಸಾಫ್ಟವೇರ್ ಉದ್ಯೋಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಯುವಕ ಕೇರಳ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಕೆಲ ವಿಶಯಗಳಿಗೆ ಮನಸ್ತಾಪ ಉಂಟಾಗಿತ್ತು ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ :ಲಿವಿಂಗ್​ ರಿಲೇಷನ್​ನಲ್ಲಿದ್ದ ಗೆಳತಿಯನ್ನು ಕೊಲೆ ಮಾಡಿ 8 ತಿಂಗಳ ಕಾಲ ಫ್ರಿಡ್ಜ್​ನಲ್ಲಿಟ್ಟ ಸೈಕೋ !

ಇದೇ ಕಾರಣಕ್ಕೆ ನಿನ್ನೆ ಮಧ್ಯರಾತ್ರಿ ಜಿತಿನ್​ ಯುವತಿಗೆ ವಿಡಿಯೋ​ ಕರೆ ಮಾಡಿದ್ದು. ಈ ವೇಳೆ ಮತ್ತೆ ಇವರಿಬ್ಬರ ನಡುವೆ ಗಲಾಟೆಯಾಗಿದೆ. ಇದೇ ವೇಳೆ ವಿಡಿಯೋ ಕಾಲ್​ನಲ್ಲಿ ಯುವಕ ಜಿತಿನ್​ ಕೈ ಕೊಯ್ದುಕೊಂಡು ಕಾಲ್​​ ಕಟ್​ ಮಾಡಿದ್ದಾನೆ. ಇದರಿಂದ ಗಾಬರಿಯಾದ ಯುವತಿ ಮತ್ತೆ ಕಾಲ್​ ಮಾಡಿದ್ದಾಳೆ ಆದರೆ ಯುವಕ ಜಿತಿನ್ ಪೋನ್​ ಕರೆಯನ್ನು ಸ್ವೀಕರಿಸಿಲ್ಲ.

ಹೀಗಾಗಿ ಯುವತಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಯುವತಿಯ ಮಾಹಿತಿಯ ಮೇರೆಗೆ ಪೊಲೀಸರು ಯುವಕನ ಮೊಬೈಲ್​ ಲೊಕೇಶನ್​ ಮೂಲಕ ಯುವಕನ ಪಿ.ಜಿಯನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ರೂಂನಲ್ಲಿ ರಕ್ತದ ಮಡುವಿನಲ್ಲಿದ್ದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments