Thursday, August 28, 2025
HomeUncategorizedಬ್ಯಾಂಕ್​ ಸಾಲ ತೀರಿಸಲಾಗದೆ ಆಟೋ ಚಾಲಕ ಆತ್ಮಹತ್ಯೆ

ಬ್ಯಾಂಕ್​ ಸಾಲ ತೀರಿಸಲಾಗದೆ ಆಟೋ ಚಾಲಕ ಆತ್ಮಹತ್ಯೆ

ಶಿವಮೊಗ್ಗ: ಆಟೋಚಾಲಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮಾಸ್ತಿಕಲ್ಲು ಬಳಿ ನಡೆದಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ: ಸರ್ಕಾರದ ಮತ್ತೊಂದು ಎಡವಟ್ಟು

38 ವರ್ಷದ ಆಟೋ ಚಾಲಕ ಶಶಿಕುಮಾರ್ ಮೃತ ದುರ್ದೈವಿ. ಶಶಿಕುಮಾರ್ ಪ್ಯಾಸೆಂಜರ್ ಆಟೋ ಚಾಲಕನಾಗಿದ್ದ, ಮೂಲತಃ ಮಲ್ಲಂದೂರು ನಿವಾಸಿಯಾಗಿರುವ ಶಶಿ, ಖಾಸಗಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ. ಸಾಲದ ಬಡ್ಡಿ ಹೆಚ್ಚಾದ ಹಿನ್ನೆಲೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments