Sunday, September 7, 2025
HomeUncategorizedಕರ್ನಾಟಕದ ಇಬ್ಬರು ಸಾಧಕರಿಗೆ ಪದ್ಮಶ್ರೀ ಘೋಷಣೆ

ಕರ್ನಾಟಕದ ಇಬ್ಬರು ಸಾಧಕರಿಗೆ ಪದ್ಮಶ್ರೀ ಘೋಷಣೆ

ನವದೆಹಲಿ : 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ರಾಜ್ಯದ ಇಬ್ಬರು ಸಾಧಕರಿಗೆ ಪ್ರದ್ಮಶ್ರೀ ಗೌರವ ಒಲಿದು ಬಂದಿದೆ.

ಜೇನು ಕುರುಬ ಹೋರಾಟಗಾರ ಮೈಸೂರಿನ ಸೋಮಣ್ಣ ಹಾಗೂ ಸುಟ್ಟ ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಕಾಯಕ ಮಾಡುತ್ತಿರುವ ಪ್ರೇಮಾ ಧನರಾಜ್​ ಅವರಿಗೆ ಪದ್ಮಶ್ರೀ ಗೌರವ ನೀಡಲಾಗುವುದು ಎಂದು ಘೋಷಿಸಲಾಗಿದೆ.

ಪ್ರೇಮಾ ಧನರಾಜ್​ 25 ಸಾವಿರಕ್ಕೂ ಹೆಚ್ಚು ಮಂದಿಗೆ ಪ್ಲಾಸ್ಟಿಕ್​ ಸರ್ಜರಿಯ ದಾಖಲೆ ಹೊಂದಿದ್ದಾರೆ. ಸೋಮಣ್ಣ ಜೇನು ಕುರುಬ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇನ್ನೂ ಅಸ್ಸಾಂನ ಪರ್ಬತಿಗೆ ಪದ್ಮಶ್ರೀ ನೀಡಲಾಗುತ್ತಿದ್ದು, ಇವರು ಮೊದಲ ಆನೆ ಮಾವುತ ಮಹಿಳೆ ಖ್ಯಾತಿ ಪಡೆದಿದ್ದಾರೆ.

34 ಸಾಧಕರಿಗೆ ಪದ್ಮಶ್ರೀ ಪ್ರಕಟ

ಈ ಬಾರಿ ದೇಶದ ವಿವಿಧೆಡೆಯ 34 ಸಾಧಕರಿಗೆ ಪದ್ಮಶ್ರೀ ಪ್ರಕಟ ಮಾಡಲಾಗಿದೆ. ಅ‘ಸಾಮಾನ್ಯ’ ಸಾಧಕರನ್ನು ಗುರುತಿಸಿ ಪದ್ಮಶ್ರೀ ಪುರಸ್ಕಾರ ಘೋಷಿಸಲಾಗಿದೆ. ಭಾರತದ 75ನೇ ಗಣರಾಜ್ಯೋತ್ಸವದ ದಿನವಾದ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments