Friday, September 5, 2025
HomeUncategorized‘ಗೃಹಲಕ್ಷ್ಮಿ ಹಣ’ ಫಲಾನುಭವಿಗಳಿಗೂ ಮೊದಲು ಚಾಮುಂಡೇಶ್ವರಿಗೆ ಅರ್ಪಣೆ

‘ಗೃಹಲಕ್ಷ್ಮಿ ಹಣ’ ಫಲಾನುಭವಿಗಳಿಗೂ ಮೊದಲು ಚಾಮುಂಡೇಶ್ವರಿಗೆ ಅರ್ಪಣೆ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಯಲ್ಲೊಂದು ಗೃಹಲಕ್ಷ್ಮಿ ಯೋಜನೆಯ ಹಣ ಇನ್ಮುಂದೆ ಫಲಾನುಭವಿಗಳಿಗೂ ಮೊದಲು ಹರಕೆಯ ಮೂಲಕ ಪ್ರತಿ ತಿಂಗಳು ನಾಡದೇವತೆ ಚಾಮುಂಡೇಶ್ವರಿ ಅರ್ಪಣೆ ಮಾಡಲಾಗುತ್ತದೆ.

ಈ ಸಂಬಂಧ ಕಾಂಗ್ರೆಸ್ ಶಾಸಕ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.

ಈ ಹಿನ್ನಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫಲಾನುಭವಿಗಳಿಗೆ ಜಮಾಗೂ ಮುನ್ನಾ, ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಹರಕೆಯ ರೂಪದಲ್ಲಿ ಅರ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಜಮೀರ್​ ಹೇಳಿಕೆಗೆ ಗರಂ ಆದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ!

ಈ ಯೋಜನೆಯನ್ನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ 2000 ರೂ ಹರಕೆಯ ರೂಪದಲ್ಲಿ ಸಲ್ಲಿಸೋ ಮೂಲಕ ಆರಂಭಿಸಲಾಗಿತ್ತು. ಹೀಗಾಗಿ ಇನ್ಮುಂದೆ ಮೊದಲು ಫಲಾನುಭವಿಗಳಿಗೆ 2000 ಹಣ ಜಮಾಗೂ ಮುನ್ನಾ ಚಾಮುಂಡೇಶ್ವರಿಗೆ ಹರಕೆಯ ರೂಪದಲ್ಲಿ ಸರ್ಕಾರ ಅರ್ಪಣೆ ಮಾಡಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments