Saturday, August 23, 2025
Google search engine
HomeUncategorizedರಾಜ್ಯದಾದ್ಯಂತ ಗ್ರಾಮೀಣ ನ್ಯಾಯಾಲಯಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ : ಸಚಿವ ಎಚ್‌ಕೆ ಪಾಟೀಲ್

ರಾಜ್ಯದಾದ್ಯಂತ ಗ್ರಾಮೀಣ ನ್ಯಾಯಾಲಯಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ : ಸಚಿವ ಎಚ್‌ಕೆ ಪಾಟೀಲ್

ಗದಗ: ಸಾವಿರಾರು ಗ್ರಾಮೀಣ ನ್ಯಾಯಲಯಗಳನ್ನು ರಾಜ್ಯದಾದ್ಯಂತ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್‌ಕೆ ಪಾಟೀಲ್ ಹೇಳಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಸಾವಿರಾರು  ನ್ಯಾಯಾಲಯಗಳನ್ನು ಆರಂಭಿಸಿದ್ದಾರೆ. ಇದರಿಂದ  ರೈತರಿಗೆ ಮತ್ತು ದಿನಗೂಲಿ ಕಾರ್ಮಿಕರಿಗೆ ಸಹಾಯವಾಗುತ್ತದೆ. ಈ ನ್ಯಾಯಾಲಯಗಳು ಜಿಲ್ಲಾ ಕೋರ್ಟ್‌ಗಳು ಮತ್ತು ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿನ ವಿಪರೀತ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಚಾಕು ಹಿಡಿದು ವಿಧಾನಸೌಧಕ್ಕೆ ಆಗಮಿಸಿದ ಮಹಿಳೆ

ಕರ್ನಾಟಕದ ಗ್ರಾಮೀಣ ನ್ಯಾಯಾಲಯಗಳು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಂತೆ ಕಾರ್ಯನಿರ್ವಹಿಸುತ್ತವೆ. ಆದರೆ, ಪ್ರತಿ ಗ್ರಾಮಗಳಲ್ಲಿ ಮೂಲಸೌಕರ್ಯ ಸೇರಿದಂತೆ ಹಲವು ಅಡೆತಡೆಗಳು ಇರುವುದರಿಂದ ಇಂತಹ ನ್ಯಾಯಾಲಯಗಳನ್ನು ಆರಂಭಿಸುವುದು ಪ್ರಾಯೋಗಿಕವಾಗಿ ಕಷ್ಟಕರವಾಗಿದೆ ಎಂದಿದ್ದಾರೆ.

ಇನ್ನೂ  ಯುಪಿಎ ಸರ್ಕಾರವು 2008 ರಲ್ಲಿ ನ್ಯಾಯಾಂಗ ಪ್ರಕ್ರಿಯೆಯನ್ನು ಸಹಭಾಗಿತ್ವ, ಅಗ್ಗ ಮತ್ತು ಗ್ರಾಮೀಣ ಭಾರತಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುವ ಗ್ರಾಮ ನ್ಯಾಯಾಲಯ ಕಾಯಿದೆಯನ್ನು ಅಂಗೀಕರಿಸಿತು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments