Saturday, August 23, 2025
Google search engine
HomeUncategorizedಪಾತಾಳದಲ್ಲಿದ್ದ ಕಾಂಗ್ರೆಸ್ಸನ್ನು ನಾನು ಮೇಲಕ್ಕೆತ್ತಿದ್ದೇನೆ : ಡಿಕೆಶಿ ಅಸಮಾಧಾನ

ಪಾತಾಳದಲ್ಲಿದ್ದ ಕಾಂಗ್ರೆಸ್ಸನ್ನು ನಾನು ಮೇಲಕ್ಕೆತ್ತಿದ್ದೇನೆ : ಡಿಕೆಶಿ ಅಸಮಾಧಾನ

ಬೆಂಗಳೂರು : ಯಾರ್ಯಾರೋ ಕಷ್ಟಪಟ್ಟು ಕೆಲಸ ಮಾಡುತ್ತಾರೆ,ಆದರೆ ಬೇರೆಯವರು ಅದರ ಸವಲತ್ತನ್ನು ಅನುಭವಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧವನ್ನು ನಿರ್ಮಿಸಿದಾಗ, ಖೈದಿಗಳು ತಮ್ಮ ಕಾಲುಗಳಿಗೆ ಸರಪಣಿಗಳೊಂದಿಗೆ ಕಲ್ಲುಗಳನ್ನು ಕಟ್ಟಲು ಸಾಗಿಸುತ್ತಿದ್ದರು, ಆ ದಿನಗಳಲ್ಲಿ ನಮ್ಮಲ್ಲಿ ಯಂತ್ರೋಪಕರಣಗಳು ಇರಲಿಲ್ಲ.

ಇದನ್ನೂ ಓದಿ : ಆಧಾರ್‌-ಪಾನ್‌ ಲಿಂಕ್‌ಗೆ ನಾಳೆಯೇ ಡೆಡ್‌ಲೈನ್

ಅಲ್ಲದೆ ಆ ಕಟ್ಟಡವನ್ನು ನಿರ್ಮಿಸಿದವರು ನಮ್ಮೊಂದಿಗಿಲ್ಲ ಆದರೆ ನಾವುಗಳು ಇಲ್ಲೇ ಕುಳಿತು ದರ್ಬಾರ್ ಮಾಡುತ್ತಿದ್ದೇವೆ ಎಂದರು.

ಪಾತಾಳದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ನಾನು ಶ್ರಮಪಟ್ಟು ಮೇಲೆತ್ತಿದ್ದೇನೆ ಆದರೆ ಇದೀಗ ಅಧಿಕಾರವನ್ನು ಬೇರೆಯವರು ಅನುಭವಿಸುತ್ತಿದ್ದಾರೆ. ಈ ಜೀವನವೇ ಹೀಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments