Saturday, August 23, 2025
Google search engine
HomeUncategorizedಕಾಂಗ್ರೆಸ್ ಎಸ್​​ಟಿ ಜನಾಂಗಕ್ಕೆ ಏನೂ ಮಾಡಿಲ್ಲ : ಬಿಎಸ್​​ ಯಡಿಯೂರಪ್ಪ

ಕಾಂಗ್ರೆಸ್ ಎಸ್​​ಟಿ ಜನಾಂಗಕ್ಕೆ ಏನೂ ಮಾಡಿಲ್ಲ : ಬಿಎಸ್​​ ಯಡಿಯೂರಪ್ಪ

ಬಳ್ಳಾರಿ:  ನವಶಕ್ತಿ ಸಮಾವೇಶ ಉದ್ದೇಶಿಸಿ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಭಾಷಣ ಮಾಡಿದ್ದಾರೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕಾಗಿದೆ ಎಂದರು.

ನಾನು ಸಿಎಂ ಆಗಿದ್ದ ವೇಳೆ ಸರ್ಕಾರಿ ವಾಲ್ಮೀಕಿ ಜಯಂತಿ ಮಾಡಲಾಗಿದೆ. ಕಾಂಗ್ರೆಸ್ ಎಸ್​​ಟಿ ಜನಾಂಗಕ್ಕೆ ಏನೂ ಮಾಡಿಲ್ಲ. ಎಸ್​ಟಿ ಮಹಿಳೆಯನ್ನ ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ನಾನು ಸಿಎಂ ಆಗಿದ್ದ ವೇಳೆ ಶ್ರೀರಾಮುಲು, ಜನಾರ್ದನರೆಡ್ಡಿ ಅವರು ಕೇಳಿದಷ್ಟು ಅನುದಾನ ನೀಡಿದ್ದೆ. ಈ ಸಮಾವೇಶದ ಮೂಲಕ ಕಾಂಗ್ರೆಸ್ ನಾಯಕರು ಹೆದರಿ ಹೋಗಿದ್ದಾರೆ. ಈ ಕಾರ್ಯಕ್ರಮದ ಜನಸ್ತೋಮ ಕಾಂಗ್ರೆಸ್​ಗೆ ಅಘಾತ ಆಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್ ಮೂರು ತಲೆಮಾರು ಆಗುವಷ್ಟು ಆಸ್ತಿ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಇದನ್ನ ರಾಜ್ಯದ ಜನರು ಗಮನಿಸಬೇಕಾಗಿದೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಬೇಕಾಗಿದೆ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments