Friday, September 5, 2025
HomeUncategorizedಶೀಘ್ರದಲ್ಲೇ 4 ಸಾರಿಗೆ ನಿಗಮಗಳು ಮರ್ಜ್ ಆಗೋದು ಫಿಕ್ಸ್..?

ಶೀಘ್ರದಲ್ಲೇ 4 ಸಾರಿಗೆ ನಿಗಮಗಳು ಮರ್ಜ್ ಆಗೋದು ಫಿಕ್ಸ್..?

ಬೆಂಗಳೂರು : ಸಾರಿಗೆ ಸಿಬ್ಬಂದಿಯ ಮುಷ್ಕರ, ಕೊರೊನಾ ಸೋಂಕಿನ ಹೊಡೆತದಿಂದಾಗಿ ಸಾರಿಗೆ ನಿಗಮಗಳು ನಷ್ಟದ ಕೂಪಕ್ಕೆ ಸಿಲುಕಿವೆ. ಕಳೆದ ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರಿಗೆ ನಿಗಮಗಳು ಶೀಘ್ರದಲ್ಲೇ ವಿಲೀನವಾಗೋದು ಫಿಕ್ಸ್ ಎನ್ನಲಾಗ್ತಿದೆ. ಈ ಸಂಬಂಧ ಇವತ್ತು ಕಮಿಟಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ರೆ ನಿಗಮಗಳು ಮರ್ಜ್ ಆಗೋದು ಪಕ್ಕಾ ಆಗಿದೆ.

ಬಿಎಂಟಿಸಿ, ಕೆಎಸ್ಆರ್​ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ಈಶಾನ್ಯ ಸಾರಿಗೆ ನಿಗಮಗಳನ್ನ ಇನ್ಮುಂದೆ ಒಂದೇ ನಿಗಮವಾಗಿ ಮಾಡಿ ಎಂಬ ಕೂಗು ಹಿಂದಿನಿಂದಲೂ ಬಲವಾಗಿ ಕೇಳಿಬಂದಿದೆ‌. ಈ ಸಂಬಂಧ ಎಲ್ಲರ ಸಲಹೆ ಸ್ವೀಕರಿಸಿರುವ ಶ್ರೀನಿವಾಸ್ ಮೂರ್ತಿ ನೇತೃತ್ವದ ಸಾರಿಗೆ ನಿಗಮಗಳ ಪುನಶ್ಚೇತನ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸಾರಿಗೆ ನಿಗಮಗಳನ್ನ ಅಭಿವೃದ್ಧಿ ಪಡಿಸಲು ಸರ್ಕಾರ ಏಕ ಸದಸ್ಯ ಸಮಿತಿ ರಚನೆ ಮಾಡಿ ಸಾರ್ವಜನಿಕರು ಹಾಗೂ ಸಾರಿಗೆ ಒಕ್ಕೂಟಗಳ ಸಲಹೆ ಕೇಳಿತ್ತು.‌ ಸಾರಿಗೆ ನಿಗಮಗಳನ್ನ ಆರ್ಥಿಕವಾಗಿ ಸದೃಡ ಮಾಡಬೇಕಾದ್ರೆ ನಾಲ್ಕು ಸಾರಿಗೆ ನಿಗಮಗಳನ್ನ ಒಂದು ಮಾಡುವಂತೆ ಸಾರಿಗೆ ಒಕ್ಕೂಟಗಳು ಸೂಚನೆ ನೀಡಿದ್ವು. ಹೀಗಾಗಿ ಈ ಹಿಂದೆ ಕೆಎಸ್ಆರ್ಟಿಸಿ ಎಂಡಿಯಾಗಿ ಕಾರ್ಯನಿರ್ವಹಿಸಿದ್ದ ಶ್ರೀನಿವಾಸಮೂರ್ತಿ ನಿಗಮಗಳ ಸ್ಥಿತಿಗತಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.‌ ಸದ್ಯ ನಾಲ್ಕು ನಿಗಮಗಳ ವಿಲೀನ ಚೆಂಡು ಸಿಎಂ ಬೊಮ್ಮಾಯಿ ಅಂಗಳಕ್ಕೆ ತಲುಪಿದೆ.‌

4 ನಿಗಮಗಳನ್ನು ವಿಲೀನ ಮಾಡಿ ಒಂದೇ‌ ನಿಗಮ ರಚಿಸುವಂತೆ ನಿಗಮದ ಅಧಿಕಾರಿಗಳು, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್. ಶ್ರೀನಿವಾಸ್ ಮೂರ್ತಿ ನೇತೃತ್ವದ ತಂಡ ಸಾರಿಗೆ ನಿಗಮಗಳ‌ ಪುನರ್​ರಚನಾ ಸಮಿತಿಗೆ ಶಿಫಾರಸು ಮಾಡಿದ್ವು. ಕೊರೊನಾ ಬಂದಾಗಿಂದ ಸಾರಿಗೆ ನಿಗಮಗಳಲ್ಲಿ ಆರ್ಥಿಕ ಪರಿಸ್ಥಿತಿ ಕುಗ್ಗಿದೆ. ಬಸ್​ಗಳ‌ ನಿರ್ವಹಣೆ, ಡಿಪೋಗಳ ಖರ್ಚು ವೆಚ್ಚ, ನೌಕರರ ಸಂಬಳಕ್ಕೂ ಹಣವಿಲ್ಲದೇ ನಿಗಮಗಳು ಪರದಾಟ ಅನುಭವಿಸುತ್ತಿವೆ. ‌1997 ರಿಂದ ಈವರೆಗೂ ನಾಲ್ಕೂ ನಿಗಮಗಳು ಬರೋಬ್ಬರಿ 4,500 ಕೋಟಿ ರೂ. ನಷ್ಟ ಅನುಭವಿಸಿವೆ. ಪಿಎಫ್, ಎಲ್​ಐಸಿ, ನಿವೃತ್ತಿ ವೇತನ ಸೇರಿ 1,700 ಕೋಟಿ ರೂ. ಬಾಕಿ ಇದೆ. ಹೀಗಾಗಿ ನಾಲ್ಕು ನಿಗಮಗಳನ್ನೂ ವಿಲೀನಗೊಳಿಸಿ ಆಡಳಿತ ವಿಭಾಗ ಸೇರಿದಂತೆ ಹಲವು ನಷ್ಟ ತಪ್ಪಿಸುವಂತೆ ಕಮಿಟಿಗೆ ಸಲಹೆ ನೀಡಲಾಗಿತ್ತು.‌

ಒಟ್ನಲ್ಲಿ ಲಾಭ ನಷ್ಟದ ಜೊತೆಗೆ ನಿಗಮದ ಮರ್ಜ್ ವಿಚಾರದ ವರದಿ ಸರ್ಕಾರಕ್ಕೆ ತಲುಪಿದ್ದು, ಈ ಸಂಬಂದ ಕ್ಯಾಬಿನೆಟ್​​ನಲ್ಲಿ ಚರ್ಚೆ ನಡೆಯಲಿದೆ.‌ ನಂತರ ಸರ್ಕಾರ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳಲಿದ್ದು, ನಾಲ್ಕು ಸಾರಿಗೆ ನಿಗಮಗಳು ವಿಲೀನ ಆಗುವ ಸಾಧ್ಯತೆ ಹೆಚ್ಚಾಗಿದೆ.‌

RELATED ARTICLES
- Advertisment -
Google search engine

Most Popular

Recent Comments