Saturday, August 23, 2025
Google search engine
HomeUncategorized‘ವೀರಕಂಬಳ’ದಲ್ಲಿ ಸಿನಿ ದೈತ್ಯರ ರೋಚಕ ಕಾಳಗ..!

‘ವೀರಕಂಬಳ’ದಲ್ಲಿ ಸಿನಿ ದೈತ್ಯರ ರೋಚಕ ಕಾಳಗ..!

ಕರಾವಳಿಯ ಕಂಬಳವನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸೋಕೆ ಅದ್ಧೂರಿ ವೆಚ್ಚದಲ್ಲಿ ವೀರ ಕಂಬಳ ಸಿನಿಮಾ ತಯಾರಾಗ್ತಿದೆ.  ತುಳುನಾಡಿನ ಸಂಸ್ಕೃತಿ, ಪರಂಪರೆಯ ಅದ್ಭುತ ಸಿನಿಮಾ ವೀರ ಕಂಬಳ. ಇದೀಗ ಈ ಜಬರ್ದಸ್ತ್​ ಸಿನಿಮಾದಲ್ಲಿ ಇಬ್ಬರೂ ಸ್ಟಾರ್​ ನಟರ ನಡುವೆ ಮಹಾ ಕಾಳಗ ನಡೆಯಲಿದೆ. ಯೆಸ್​​.. ಆ ಸೂಪರ್​ ಸ್ಟಾರ್ಸ್​ ಯಾರು ಗೊತ್ತಾ..? ಈ ಸ್ಟೋರಿ ನೋಡಿ.

ಕೋರ್ಟ್ ಅಡ್ಡಾದಲ್ಲಿ ಘಟಾನುಘಟಿಗಳ ಫೈಟಿಂಗ್​​

ತುಳುನಾಡಿನಲ್ಲಿ ನಡೆಯೋ ಕಂಬಳ ಕ್ರೀಡೆಯ ಬಗ್ಗೆ ನೀವೆಲ್ಲಾ ಕೇಳೆ ಇರ್ತೀರಾ. ಆದ್ರೇ ಅದರ ಕಂಪ್ಲೀಟ್​ ಸ್ಟೋರಿಯನ್ನು ಸಿಲ್ವರ್​ ಸ್ಕ್ರೀನ್​ ಮೇಲೆ ನೋಡೋ ಭಾಗ್ಯ ಸಿಕ್ಕರೆ. ವಾವ್ಹ್​​..! ಅದ್ಭುತ ಅಲ್ವಾ..? ಯೆಸ್​​.. ಕೋಣಗಳನ್ನು ಆರೈಕೆ ಮಾಡೋಕೆ ಎಸಿ ರೂಮ್,  ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಕೋ ಕೋಣಗಳನ್ನು ಸಾಕೋ ಓನರ್​ಗಳು. ಹೀಗೆ ಕಂಬಳ ಕೇವಲ ಕ್ರೀಡೆಯಲ್ಲ. ಅದೊಂದು ಎಮೋಷನ್​​.

ಕಂಬಳದಲ್ಲಿ ಭಾಗವಹಿಸೋ ಕೋಣ ನ್ಯಾಷನಲ್​ ಸೂಪರ್​ ಸ್ಟಾರ್​ ಇದ್ದ ಹಾಗೆ. ಇದೀಗ ಈ ಕೋಣಗಳ ಮೇಲೆ ರೋಚಕ ಸಿನಿಮಾ ಬರ್ತಿದೆ. ವಿಶ್ವ ಸಿನಿದುನಿಯಾವನ್ನೇ  ಥಂಡಾ ಹೊಡೆಸೋಕೆ  ಬೆಚ್ಚಿ ಬೀಳಿಸೋ ಸಿನಿಮಾ ತಯಾರಾಗ್ತಿದೆ. ವೀರ ಕಂಬಳ ಪೂರ್ಣ ಪ್ರಮಾಣದಲ್ಲಿ ಕಂಬಳದ ಮೇಲೆ ತಯಾರಾಗ್ತಿರೋ ಸಿನಿಮಾ . ಸ್ಟಾರ್​ ಡೈರೆಕ್ಟರ್​ ರಾಜೇಂದ್ರ ಸಿಂಗ್​ ಬಾಬು ನಿರ್ದೇಶನದಲ್ಲಿ ಕನ್ನಡ ಸಿನಿಲೋಕದಲ್ಲಿ ಹೊಸ ದಾಖಲೆ ಬರೆಯೋಕೆ ಸಜ್ಜಾಗಿದೆ. ಅಸಲಿಗೆ ವಿಷ್ಯ ಏನಪ್ಪಾ ಅಂದ್ರೆ, ಈ ಸಿನಿಮಾದ ಕ್ಲೈಮ್ಯಾಕ್ಸ್​ಗೆ ಘಟನಾಘಟಿಗಳಾದ ಪ್ರಕಾಶ್​ರಾಜ್​​ V/S ರವಿಶಂಕರ್​ ನಡುವೆ ಜಟಾಪಟಿ ನಡೆಯಲಿದೆ.

ಗಲ್ಫ್​​ ರಾಷ್ಟ್ರಗಳು ನಿದ್ದೆ ಬಿಟ್ಟು ನೋಡೋ ವೀರ ಕಂಬಳ

ಕರಾವಳಿಯ ಕಂಬಳದಲ್ಲಿ  ಭೂಗತ ಲೋಕದ ಕಥೆ..!

ತುಳುನಾಡಿನ ದೇಸಿ ಪ್ರತಿಭೆ, ಕನ್ನಡದ ಹುಸೇನ್​​ ಬೋಲ್ಟ್​​ ಶ್ರೀನಿವಾಸಗೌಡ ಈ ಸಿನಿಮಾದಲ್ಲಿ ರಿಯಲ್​ ಹೀರೋ ಆಗಿ ಮಿಂಚಿದ್ದಾರೆ. ಸಿಕ್ಸ್​​ ಪ್ಯಾಕ್​​ ಧೀರ ಕೋಣಗಳನ್ನ ಪಳಗಿಸಿ, ಸಿಲ್ವರ್​ ಸ್ಕ್ರೀನ್​ ಮೇಲೆ ಧೂಳೆಬ್ಬಿಸ್ತಾರಂತೆ. ಜೊತೆಗೆ ಡೆಡ್ಲಿ ಆದಿತ್ಯನ ಗ್ಯಾಂಗ್​ಸ್ಟಾರ್ ಲುಕ್​ ನೋಡಿ, ಒಂದು ಕ್ಷಣ ಅವಕ್ಕಾಗಿ ಹೋಗ್ತಾರಂತೆ. ಥ್ರಿಲ್ಲರ್​ ಸಿನಿಮಾಗಳಲ್ಲಿ ಮಿಂಚ್ತಿದ್ದ ರಾಧಿಕಾ ನಾರಾಯಣ್,​​ ಕಮೀಷನರ್​​ ರೂಲ್​ ಮಾಡಲಿದ್ದಾರೆ. ಪ್ರತಿ ನಿತ್ಯ 40 ರಿಂದ 50 ಸೆಟ್​​ಗಳು, 80 ರಿಂದ 100 ಕೋಣಗಳು, ಸಾವಿರಾರು ಕಲಾವಿದರ ಸಮ್ಮುಖದಲ್ಲಿ ಕೆಜಿಎಫ್ ಲೆವೆಲ್​ನಲ್ಲಿ  ವೀರಕಂಬಳ ಸಿನಿಮಾ ತೆರೆಗೆ ಬರ್ತಿದೆ.

ಒಂದಿಲ್ಲೋಂದು ಸುದ್ದಿಗಳಿಂದ ಸಖತ್​ ಹೈಪ್​ ಕ್ರಿಯೇಟ್​ ಮಾಡ್ತಿರೋ ವೀರ ಕಂಬಳ ಸಿನಿಮಾದ ಕ್ಲೈಮ್ಯಾಕ್ಸ್​ ಸೀನ್​ ಶೂಟ್​ ಮಾಡಲಾಯಿತು. ಈ ದೃಶ್ಯದಲ್ಲಿ ಪ್ರಕಾಶ್​ ರಾಜ್​​ ಲಾಯರ್​ ಆಗಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿತು. ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಖುದ್ದಾಗಿ ಈ ಸ್ಪೆಷಲ್​​ ಸೀಕ್ವೆನ್ಸ್​ಗೆ ಪ್ರಕಾಶ್​ ರಾಜ್​ ಕಾಲ್​ಶೀಟ್​ ಪಡೆದಿದ್ದಾರೆ. ಈ ಕೋರ್ಟ್​ ಸೀನ್​​​ನಲ್ಲಿ ಪ್ರಕಾಶ್​ಗೆ ಎದುರಾಳಿಯಾಗಿ ಆರ್ಮುಗ ಖ್ಯಾತಿಯ ರವಿಶಂಕರ್​​ ಎದುರಾಗಿದ್ದಾರೆ.

ಕಂಬಳ ಕ್ರೀಡೆಯನ್ನ ನ್ಯಾಚುರಲ್​​ ಆಗಿ ತೋರಿಸೋಕೆ ಭಾರೀ ಮೊತ್ತದ ಸ್ಪೆಷಲ್​​ ಲೆನ್ಸ್​ ತರಿಸಿ, ಕ್ಯಾಮೆರಾಗೆ ಅಳವಡಿಸಲಾಗಿದೆ. ಅರುಣ್​ ರೈ  ತೋಡಾರ್​  ಚಿತ್ರಕ್ಕಾಗಿ ಕೋಟಿ ಕೋಟಿ ಹಣವನ್ನು ನೀರಿನಂತೆ ಸುರಿದಿದ್ದಾರೆ. ಎಲ್ಲೂ ಕಾಂಪ್ರಮೈಸ್​ ಆಗದೆ, ಹಾಲಿವುಡ್ ಸಿನಿಮಾ​​ ರೇಂಜ್​ಗೆ ವೀರ ಕಂಬಳ ಮೂಡಿ ಬರ್ತಿದೆ. ಮಣಿಕಾಂತ್​ ಕದ್ರಿ ಸಂಗೀತ. ವಿಜಯ್​​ಕುಮಾರ್​​ ಕೊಡಿಯಾಲ್​ಬೈಲ್​ ಸಂಭಾಷಣೆ ಇದೆ. ಒಟ್ನಲ್ಲಿ ಕಂಬಳದ ಕ್ರೇಜ್​​ ಕಣ್ಣಿಗೆ ರಾಚುವಂತೆ ಸೆಪ್ಟಂಬರ್​ ವೇಳೆಗೆ ನಿಮ್ಮೆದುರು ಬರಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES
- Advertisment -
Google search engine

Most Popular

Recent Comments