Wednesday, September 17, 2025
HomeUncategorizedರಾಜ್ಯಕ್ಕೂ ಹಬ್ಬಿದ ನೂಪುರ್ ಕಿಚ್ಚು ಎಲ್ಲೆಡೆ ಹೈ ಅಲರ್ಟ್

ರಾಜ್ಯಕ್ಕೂ ಹಬ್ಬಿದ ನೂಪುರ್ ಕಿಚ್ಚು ಎಲ್ಲೆಡೆ ಹೈ ಅಲರ್ಟ್

ಹುಬ್ಬಳ್ಳಿ: ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗ್ತಿದೆ. ಇತ್ತ ಈ ಕಿಚ್ಚು ರಾಜ್ಯಕ್ಕೂ ಹಬ್ಬಿದ್ದು, ಹುಬ್ಬಳ್ಳಿ ಧಾರವಾಡ, ಸೇರಿದಂತೆ ಜಿಲ್ಲಾದ್ಯಂತ ಪೊಲೀಸರು ಕಚ್ಚೆಟ್ಟರ ವಹಿಸಿದ್ದಾರೆ.

ಸೂಕ್ಷ್ಮ, ಮತ್ತು ಅತಿಸೂಕ್ಷ್ಮ ಪ್ರದೇಶ ಮಸೀದಿಗಳಲ್ಲಿ ಗಸ್ತು ಹಾಗೂ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಳೆ ಹುಬ್ಬಳ್ಳಿ, ಗಣೇಶ್ ಪೇಟೆ, ಈದ್ಗಾ ಮೈದಾನ, ಕೌಲ್ ಪೇಟೆ, ಮಂಟೂರ್ ರೋಡ್ ನಲ್ಲಿ ಹೆಚ್ಚುವರಿ ನಿಗಾ ವಹಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಈಗಾಗಲೇ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಸಿಎಂ ಬೊಮ್ಮಾಯಿ, ಆಯಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಹದೇಗಡೆದಂತೆ ನಿಗಾ ವಹಿಸಲು ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆ.

ಪ್ರಮುಖ ಸ್ಥಳಗಳಲ್ಲಿ KSRP ಪೊಲೀಸರ ನಿಯೋಜನೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಕಾಪಾಡಲು, ಹಿಂಸಾಚಾರ ಘಟನೆಗಳಿಗೆ ಆಸ್ಪದ ನೀಡದಂತೆ, ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಆಧಾರದ ಮೇಲೆ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದೆ.

RELATED ARTICLES
- Advertisment -
Google search engine

Most Popular

Recent Comments