Site icon PowerTV

‘ಸಂಬಳ ಕೊಡಿ ಇಲ್ಲ ಸಾಯ್ತಿನಿ’

ಬೆಂಗಳೂರು : ಬೆಳಿಗ್ಗೆಯೊಳಗೆ ಸಂಬಳ ಹಾಕಿ ಇಲ್ಲ ಪ್ರಾಣ ಬಿಡುವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.

ರೆವಿನ್ಯೂ ಇನ್ಸ್​​​ಪೆಕ್ಟರ್​​ ವಜೀರ್​ ಅಹ್ಮದ್​ ಎಂಬುವವರು ಈ ಹೇಳಿಕೆಯನ್ನು ನೀಡಿದ್ದು, ಚಾಮರಾಜಪೇಟೆ ಆರ್. ಓ ರಾಥೋಡ್ ನನ್ನ ಸಂಬಳ ತಡೆಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಆರೋಗ್ಯ ಕಾರಣಕ್ಕೆ ರಜೆ ತಗೊಂಡ್ರೆ ನೀವ್ ಹೀಗೆ ಮಾಡುವುದು ಸರಿಯಲ್ಲ. ನನ್ ಸಂಬಳ ಕೊಡಿ. ಇಲ್ಲ, ನನ್ನ ಕುಟುಂಬದ ಎಲ್ಲರೂ ವಿಷ ತಗೋತೀವಿ ಎಂದು ಸಾಯುವ ಎಚ್ಚರಿಕೆ ನೀಡಿದ್ದಾರೆ.

Exit mobile version