ಬೆಂಗಳೂರು: ಇತ್ತೀಚೆಗೆ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ 10 ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಯಾಗಿದೆ. ರಮೇಶ್ ಜಾರಕಿಹೊಳಿ ಹೊರತುಪಡಿಸಿ ಉಳಿದ ಯಾವ ಸಚಿವರಿಗೂ ಬಯಸಿದ ಖಾತೆ ಸಿಕ್ಕಿಲ್ಲ! ಡಿಸಿಎಂ ಅಶ್ವತ್ಥ್ ನಾರಾಯಣ್ ಅವರ ಕೈಯಲ್ಲಿದ್ದ ವೈದ್ಯಕೀಯ ಶಿಕ್ಷಣ ಡಾ. ಕೆ ಸುಧಾಕರ್ ಪಾಲಾಗಿದೆ. ಯಾರಿಗೆ ಯಾವ ಖಾತೆ ಅನ್ನೋದರ ಪಟ್ಟಿ ಇಲ್ಲಿದೆ.
ಎಸ್.ಟಿ.ಸೋಮಶೇಖರ್ – ಸಹಕಾರ
ಬಿ.ಸಿ.ಪಾಟೀಲ್ – ಅರಣ್ಯ
ರಮೇಶ್ ಜಾರಕಿಹೊಳಿ-ಜಲಸಂಪನ್ಮೂಲ,
ಶಿವರಾಂ ಹೆಬ್ಬಾರ್ – ಕಾರ್ಮಿಕ
ಡಾ. ಸುಧಾಕರ್ – ವೈದ್ಯಕೀಯ ಶಿಕ್ಷಣ
ಗೋಪಾಲಯ್ಯ – ಸಣ್ಣ ಕೈಗಾರಿಕೆ
ಭೈರತಿ ಬಸವರಾಜ್ – ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ ಹೊರತುಪಡಿಸಿ)
ಆನಂದ್ ಸಿಂಗ್ – ಆಹಾರ & ನಾಗರಿಕ ಪೂರೈಕೆ
ನಾರಾಯಣಗೌಡ – ಪೌರಾಡಳಿತ & ತೋಟಗಾರಿಕೆ
ಶ್ರೀಮಂತ ಪಾಟೀಲ್-ಜವಳಿ