Monday, September 15, 2025
HomeUncategorizedಬಹುಮತ ಸಾಬೀತು ಪಡಿಸ್ತೀವಿ : ಸತೀಶ್ ಜಾರಕಿಹೊಳಿ ವಿಶ್ವಾಸ..!

ಬಹುಮತ ಸಾಬೀತು ಪಡಿಸ್ತೀವಿ : ಸತೀಶ್ ಜಾರಕಿಹೊಳಿ ವಿಶ್ವಾಸ..!

ಬೆಳಗಾವಿ: ಜುಲೈ 17 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಮನವೊಲಿಕೆಗೆ ದೋಸ್ತಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಸರಕಾರಕ್ಕೆ ಏನೂ ಆಗಲ್ಲ. ಬುಧವಾರ ನಾವು ಬಹುಮತ ಸಾಬೀತು ಪಡಿಸ್ತೀವಿ ಅಂತ ಮೈತ್ರಿ ನಾಯಕರು ವಿಶ್ವಾಸ ವ್ಯಕ್ತಪಡಿಸ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಅತೃಪ್ತರಲ್ಲಿ ನಾಲ್ವರು ಶಾಸಕರು ವಾಪಾಸ್​ ಬರ್ತಿದ್ದಾರೆ ಅಂತ ಹೇಳಿದ್ದಾರೆ. 

ಬೆಳಗಾವಿಯಲ್ಲಿ ಮಾತಾಡಿದ ಅವ್ರು, ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ರೀತಿ‌ ಪ್ರಯತ್ನ ಮಾಡ್ತಿದ್ದೇವೆ. ರಾಮಲಿಂಗಾರೆಡ್ಡಿ, ರೋಷನಬೇಗ್, ಎಂಟಿಬಿ ನಾಗರಾಜ್, ಡಾ.ಕೆ.ಸುಧಾಕರ್ ನಮ್ಮ​ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಮುಂಬೈಗೆ ಹೋಗಿರುವ ಕೆಲ ಶಾಸಕರೂ ನಮ್ಮ ಜೊತೆಗಿದ್ದಾರೆ ಯಾವುದೇ ಸಮಯದಲ್ಲಿ ನಮ್ಮನ್ನ ಸೇರಿಕೊಳ್ಳಬಹುದು. ನಮ್ಮ ಸರ್ಕಾರ ಅಳಿವಿನಂಚಿನಲ್ಲಿದೆ ಎಂಬ ಭಾವನೆ ಇತ್ತು ಆದ್ರೆ ಈಗ ರಾಜ್ಯ ರಾಜಕಾರಣದಲ್ಲಿ ವಾತಾವರಣ ತಿಳಿಯಾಗಿದೆ ಅಂತ ವಿಶ್ವಾಸದ ನುಡಿಗಳನ್ನಾಡಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments